Tuesday, March 26, 2013

KAS Interview 2013 How to Face it - Article in Udayavani Josh 26 March 2013














Udayavani
  • KAS ಐಎಎಸ್‌ ಸ್ಪೆಷಲ್‌ ಆಫ‌ರ್‌: ಕಂಕಣ ಭಾಗ್ಯ ಸ್ಕೀಂ, ಆಶೀರ್ವಾದ ಸ್ಕೀಂ

  • ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌-ಜನವರಿಯಲ್ಲಿ ನಡೆಸಿದ ಗೆಝೆಟೆಡ್‌ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ

    • Udayavani | Mar 25, 2013
      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌-ಜನವರಿಯಲ್ಲಿ ನಡೆಸಿದ ಗೆಝೆಟೆಡ್‌ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಕಳೆದವಾರ ಪ್ರಕಟಿಸಿದೆ. ಒಟ್ಟು 362 ಹು¨ªೆಗಳಿಗೆ ನಡೆಸಲಾದ ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ 5574 ಅಭ್ಯರ್ಥಿಗಳ ಅಂಕಗಳನ್ನು ವಿಷಯವಾರು ಕೋಡ್‌ ಸಹಿತ ಪ್ರಕಟಿಸಲಾಗಿದೆ. ಅತ್ಯಂತ ಹೆಚ್ಚು ಅಂಕ 1109 ಇದ್ದರೆ, ಅತಿ ಕಡಿಮೆ ಅಂಕ 152 ಇದೆ. 1000ಕ್ಕೂ ಹೆಚ್ಚು ಅಂಕಗಳಿಸಿದವರು 108 ಅಭ್ಯರ್ಥಿಗಳಿದ್ದರೆ, 950ಕ್ಕೂ ಹೆಚ್ಚು ಗಳಿಸಿದವರು 293. 900 ಕ್ಕೂ ಹೆಚ್ಚು ಗಳಿಸಿದವರು 600 ಮತ್ತು 850ಕ್ಕೂ ಹೆಚ್ಚು ಅಂಕಗಳಿಸಿದವರು 1103 ಜನ ಇ¨ªಾರೆ. ಕನ್ನಡ ಮತ್ತು ಇಂಗ್ಲಿಷ್‌ ಕಡ್ಡಾಯ ಅರ್ಹತಾ ಪರೀಕ್ಷೆಯಲ್ಲಿ 309 ಜನ ಫೇಲಾಗಿ¨ªಾರೆ! ಕೆಲವರು ಕನ್ನಡದಲ್ಲಿ ಕನಿಷ್ಠ ಅಂಕ ಗಳಿಸಿದ್ದರೆ ಒಂದಿಬ್ಬರು ಸೊನ್ನೆ ಗಳಿಸಿ¨ªಾರೆ! ಕನ್ನಡದಲ್ಲಿ 118ಕ್ಕೂ ಹೆಚ್ಚು ಅಂಕಗಳಿಸಿ ಇಂಗ್ಲಿಷ್‌ನಲ್ಲಿ ಕನಿಷ್ಠ ಅಂಕಗಳಿಸಲಾರದೇ ಹೋಗಿರುವವರ ಜೊತೆ ಇಂಗ್ಲಿಷ್‌ನಲ್ಲಿ ಶೂನ್ಯ ಸಂಪಾದನೆ ಮಾಡಿದವರೂ ಎರಡಂಕಿಯಷ್ಟಿ¨ªಾರೆ! 54 ಅಭ್ಯರ್ಥಿಗಳ ಫ‌ಲಿತಾಂಶವನ್ನು ವಿವಿಧ ಕಾರಣಗಳಿಗಾಗಿ ತಡೆಹಿಡಿಯಲಾಗಿದೆ. ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್‌ 27. ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂತಿಮ ಫ‌ಲಿತಾಂಶ ಪಟ್ಟಿಯ ಪ್ರಕಟಣೆ ಮತ್ತು ಸಂದರ್ಶನ ನಡೆಸಲು ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಸಧ್ಯ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣ ಮತ್ತು ಹು¨ªೆಗಳ ಸಂಖ್ಯೆಗೆ ಅನುಗುಣವಾಗಿ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಪತ್ರ ಕಳಿಸಲಾಗುತ್ತದೆ. 

      ಮಾತೃಭಾಷಾ ಪ್ರೇಮಕ್ಕೆ ಹೆಚ್ಚು ಅಂಕ! 
      ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯ ಆಯ್ಕೆಯಲ್ಲಿ ಈ ಬಾರಿ ಉರ್ದು ಭಾಷೆಯ ಸಾಹಿತ್ಯ ಆರಿಸಿಕೊಂಡಿದ್ದ ಸುಮಾರು 9 ಅಭ್ಯರ್ಥಿಗಳಲ್ಲಿ ಒಬ್ಬರು ಅತ್ಯಂತ ಹೆಚ್ಚು ಅಂದರೆ 441 ಗಳಿಸಿದ್ದರೆ ಮೂವರು 400ಕ್ಕೂ ಹೆಚ್ಚು ಅಂಕಗಳಿಸಿ¨ªಾರೆ! ಕನ್ನಡ ಸಾಹಿತ್ಯ ತೆಗೆದುಕೊಂಡವರಲ್ಲಿ ಹೆಚ್ಚು ಗಳಿಸಿದವರು 432.5 ತೆಗೆಯಲಷ್ಟೇ ಸಮರ್ಥರಾಗಿ¨ªಾರೆ. ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ ನಡೆಯುತ್ತಿರುವ ಈ ದಿನಗಳಲ್ಲಿ ಮಾತೃಭಾಷಾ ಪ್ರೇಮಿಗಳು ಯಾವರೀತಿ ಅನುಕೂಲ ಪಡೆಯುತ್ತಾರೆ ಎಂಬುದಕ್ಕೆ ಇದಕ್ಕಿಂತಲೂ ಒಳ್ಳೆಯ ಉದಾಹರಣೆ ಇನ್ನೆಲ್ಲಿ ಸಿಗಬಹುದು ಹೇಳಿ? 
      ಉಳಿದ ವಿಷಯಗಳಲ್ಲಿ ಭೂಗೋಳ 427.5, ಮನಃಶಾಸ್ತ್ರ 413.5, ಸಮಾಜಶಾಸ್ತ್ರ 405 ಅಂಕಗಳೇ ಅತಿ ಹೆಚ್ಚು ಎಂಬುದು ಸದ್ಯಕ್ಕೆ ತಿಳಿದು ಬಂದಿರುವ ಅಂಶ. ಅಂದಹಾಗೆ ಈ ಎÇÉಾ ವಿಷಯಗಳೂ ಎಲ್ಲಿ ಬಹಿರಂಗಗೊಳ್ಳುತ್ತಿವೆ ಎಂಬ ಕುತೂಹಲ ಇದೆ ಅಲ್ಲವೇ? ಕರ್ನಾಟಕ ಲೋಕ ಸೇವಾ ಆಯೋಗದ ಪರೀûಾರ್ಥಿಗಳು ತಮ್ಮದೇ ಒಂದು ಗ್ರೂಪ್‌ ಅನ್ನು ಫೇಸ್‌ಬುಕ್‌ನಲ್ಲಿ ರಚಿಸಿಕೊಂಡಿದ್ದು ಅದರಲ್ಲಿ ಈ ಅಂಶಗಳನ್ನು ಮೊಗೆದು ತೆಗೆದು ಅಂಟಿಸುತ್ತಿ¨ªಾರೆ. ಇಂತಹದೇ ಇನ್ನೊಂದು ಗುಂಪು ಬ್ಲಾಗ್‌ನ ಕೆಎಎಸ್‌ ಪ್ರಶ್ನೆ ಪತ್ರಿಕೆ- ಮಾದರಿ ಉತ್ತರಗಳ ಕೊಂಡಿಯಲ್ಲಿ ಸೇರಿಕೊಂಡಿದ್ದು ಅಲ್ಲಿಯೂ ಪರಸ್ಪರ ಚರ್ಚೆ ನಡೆಯುತ್ತಿದೆ. ಎಲ್ಲಿಂದಲೋ ಹಾರಿ ಬರುವ ಸುದ್ದಿಗಳು ಅನೇಕವೇಳೆ ನೈಜ ಮಾಹಿತಿ ಮತ್ತು ಅಧಿಕೃತ ಅಂಕಿ-ಅಂಶಗಳನ್ನು ತಿಳಿಸುತ್ತಿವೆ. ಹೆಸರನ್ನು ಹಲವು ವೇಳೆ ಗೌಪ್ಯವಾಗಿಡಲಾಗುತ್ತದೆ. ಪರಸ್ಪರ ದೋಷಾರೋಪಗಳೂ, ಜಗಳಗಳೂ ಇರುತ್ತವೆ ಅನ್ನಿ. 

      ಕಂಕಣ ಭಾಗ್ಯ ಸ್ಕೀಂ- ಆಶೀರ್ವಾದ ಸ್ಕೀಂ- ಶಿಫಾರಸ್ಸು ಸ್ಕೀಂ 
      ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಂದರ್ಶನದಂತೆಯೇ ಕರ್ನಾಟಕ ಲೋಕಸೇವಾ ಆಯೋಗದ ಸಂದರ್ಶನವೂ ಇರುತ್ತದೆ. ವಸ್ತುನಿಷ್ಠವಾಗಿ ಸಂದರ್ಶನ ನಡೆದಲ್ಲಿ ನಿಜಕ್ಕೂ ಪ್ರತಿಭಾವಂತರಿಗೆ ಮಾತ್ರ ಅವಕಾಶ ಸಿಗುತ್ತದೆ. ಆದರೆ ಈ ಫೇಸ್‌ಬುಕ್‌ ಗ್ರೂಪ್‌ಗ್ಳಲ್ಲಿ ನಡೆಯುತ್ತಿರುವ ಚರ್ಚೆಯ ಜಾಡನ್ನು ಹಿಡಿದು ಹೋದಲ್ಲಿ ಪ್ರತಿಭೆಗಿಂತ ಇರಬೇಕೆಂಬ ಅಂಶ ಗೋಚರಿಸುತ್ತಿದೆ. ಹಾಗೆಯೇ ವಿವಿಧ ಸ್ಕೀಂಗಳ ಪರಿಚಯವೂ ಆಗುತ್ತಿದೆ. ಕಂಕಣ ಭಾಗ್ಯ ಸ್ಕೀಂ ತುಂಬಾ ಜನಪ್ರಿಯವಾಗಿದೆ. ಸಂದರ್ಶನಕ್ಕೆ ಹಾಜರಾಗುತ್ತಿರುವ ಅರ್ಹ ಅವಿವಾಹಿತ ಯುವಕನಿಗೆ ತಮ್ಮ ಮಗಳನ್ನು ಧಾರೆ ಎರೆದು ಕೊಡಲು ಸಿದ್ಧರಾಗುವ ಕನ್ಯಾಪಿತೃಗಳು ಹೇಗಾದರೂ ಮಾಡಿ ಆಯ್ಕೆ ಮಾಡಿಸಿ ಕೆಲಸ ಕೊಡಿಸುವ ಜವಾಬ್ದಾರಿ ಹೊತ್ತು, ನಿಭಾಯಿಸಿ, ಸಂದರ್ಶನ ಸಮಿತಿಯ ಸದಸ್ಯರನ್ನು ನಯವಿನಯಗಳಿಂದ ಒಲಿಸಿ, ಕಾಣಿಕೆ ಸಲ್ಲಿಸಿ ಯಶಸ್ವಿಯಾಗಿ ಕೆಲಸ ಗಿಟ್ಟಿಸಿ ಕನ್ಯೆಯನ್ನು ದಾಟಿಸುವ ಈ ಕಂಕಣಭಾಗ್ಯ ಸ್ಕೀಂಗೆ ಅನೇಕರು ಹೆಸರು ಹಚ್ಚಿ¨ªಾರೆ, ಹಲವರು ಫ‌ಲಾನುಭವಿಗಳೂ ಇ¨ªಾರೆ. ಪ್ರಭಾವಶಾಲಿ ಮಠಮಾನ್ಯಗಳ ಸ್ವಾಮೀಜಿಗಳು, ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳ ಶಿಫಾರಸ್ಸು ಒಂದಷ್ಟು ಜನರಿಗೆ ಶ್ರೀರಕ್ಷೆ ನೀಡಿದರೆ ಮತ್ತಷ್ಟು ಜನರು ಸೂಟ್‌ಕೇಸ್‌ಗಟ್ಟಲೇ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಆಶೀರ್ವಾದ ಪಡೆಯಲು ಸಿದ್ಧರಾಗಿರುತ್ತಾರೆ. ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತ ಎಂಬಂತೆ ಸಂದರ್ಶನಗಳಲ್ಲಿಯೂ ಶತಾಯ-ಗತಾಯ ಲಾಭ ಪಡೆದೇ ತೀರಬೇಕೆಂಬ ಹಠ ಅಭ್ಯರ್ಥಿಗಳನ್ನು ಎಂತಹ ಕನಿಷ್ಠ ಮಟ್ಟಕ್ಕೂ ಇಳಿಸಿಬಿಡುತ್ತದೆ! 
      15 ರಿಂದ 60 ಲಕ್ಷ ರೂಪಾಯಿಗಳವರೆಗೆ ವಹಿವಾಟು ನಡೆಯುತ್ತಿದೆ ಎನ್ನುವುದು ಫೇಸ್‌ಬುಕ್‌ ಗ್ರೂಪ್‌ನಲ್ಲಿ ಮೂಡಿಬರುತ್ತಿರುವ ಕರ್ಣಾಕರ್ಣಿ. ಮೇಲುನೋಟಕ್ಕೆ ಇವೆಲ್ಲ ಸುಳ್ಳು. ಅರ್ಹತೆ ಇರುವವರಿಗೆ, ಪ್ರತಿಭಾವಂತರಿಗೆ ಅವಕಾಶ ಇದ್ದೇ ಇದೆ ಎನ್ನುವುದು ಲೋಕಸೇವಾ ಆಯೋಗದ ಸದಸ್ಯರ ಅನ್ನಿಸಿಕೆಯಾದರೂ ವಿವಿಧ ರಾಜಕೀಯ ಪಕ್ಷಗಳು ಮತ್ತು ಜಾತಿ-ಪಂಗಡಗಳನ್ನು ಪ್ರತಿನಿಧಿಸುತ್ತಿರುವ ಈ ಸದಸ್ಯರು ಅವರವರ ಸ್ಥಾಪಿತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳದೇ ಹೊರಗೆ ಹೋಗುವಂತಿಲ್ಲ. ಅವರು ಪ್ರಾಮಾಣಿಕರಾಗಿದ್ದರೂ ಅವರ ಮೇಲೆ ಪಕ್ಷ, ಪಂಗಡಗಳು ಹೇರುವ ಒತ್ತಡಕ್ಕೆ ಮಣಿಯಲೇಬೇಕಾದ, ಋಣ ತೀರಿಸಬೇಕಾದ, ಅನಿವಾರ್ಯತೆ ಇದ್ದೇ ಇದೆ. ಇದಕ್ಕೆ ಅಪವಾದಗಳೂ ಇಲ್ಲದೇ ಇಲ್ಲ. ಈ ವಿಷಯಗಳೆÇÉಾ ಒಂದು ರೀತಿಯ ಬಹಿರಂಗ ಸತ್ಯ. ಫೇಸ್‌ಬುಕ್‌ನಲ್ಲಿ ಓಡಾಡುತ್ತಲಿದೆ ನಿತ್ಯ! 

      ಹತಾಶೆ ಬೇಡ- ಸಂದರ್ಶನ ಎದುರಿಸಿ 
      ಎಲ್ಲಾ ಸಂದರ್ಶನಗಳೂ ಕೇವಲ ಕಣ್ಣೊರೆಸುವ ತಂತ್ರ, ಕೇವಲ ಬೂಟಾಟಿಕೆ, ಮೊದಲಿಗೇ ತಮಗೆ ಬೇಕಾದವರನ್ನು ನೇಮಿಸಿಕೊಂಡು ಉಳಿದವರಿಗೆ ಸುಮ್ಮನೇ ತೊಂದರೆ ಕೊಡುವ ಪ್ರಕ್ರಿಯೆ. ತಮ್ಮ ಯೋಗ್ಯತೆ ಗಿಂತಲೂ ಕಡಿಮೆ ಅರ್ಹತೆ ಇರುವವರಿಗೆ ಕೆಲಸ ಕೊಡುವ ಇಂತಹ ಸಂದರ್ಶನಗಳಿಗೆ ಹೋಗುವುದೇ ವ್ಯರ್ಥ. ಎಲ್ಲಾ ಕಡೆಯೂ ಹಣವೇ ಹಣ. ಹಣ ಕೊಟ್ಟು ಹು¨ªೆ ಕೊಳ್ಳುತ್ತಿರುವುದರಿಂದ ಸಂದರ್ಶನಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಎಲ್ಲವೂ ಮೋಸ ಎಂಬ ಮಾತುಗಳು ಆಗಾಗ್ಗೆ ಅಲ್ಲಲ್ಲಿ ಕೇಳಿಬರುತ್ತವೆ. ಈ ಮಾತುಗಳಲ್ಲಿ ಹುರುಳಿದೆಯೋ, ಇಲ್ಲವೋ ಎಂಬುದರ ಬಗ್ಗೆ ಅಭ್ಯರ್ಥಿಗಳು ಚಿಂತಿಸಬೇಕಾದ ಅಗತ್ಯ ಇಲ್ಲ. ಕೆಲವೊಮ್ಮೆ ಇದು ಕೆಲಸ ಸಿಗದ ಹತಾಶ ಅಭ್ಯರ್ಥಿಗಳು ಹಬ್ಬಿಸಿದ ಗಾಳಿ ಸುದ್ದಿಯೂ ಆಗಿರಬಹುದು. ಎಟುಕದ ದ್ರಾಕ್ಷಿ ಹುಳಿ ಎನ್ನುವಂತಹ ಹುಳಿಹುಳಿ ಅನುಭವದ ಸಂತರ್ಪಣೆಯೂ ಆಗಿರಬಹುದು! ನಿಜವಾದ ಅರ್ಹತೆ ಇರುವ ಅಭ್ಯರ್ಥಿಗಳು ನಮ್ಮ ದೇಶದ ಆಸ್ತಿ. ಅರ್ಹರಿಗೆ ಒಂದಿÇÉಾ ಒಂದು ಕಡೆ ಒಳ್ಳೆಯ ಉದ್ಯೋಗ ಸಿಕ್ಕೇ ಸಿಗುತ್ತದೆ. ಕಾಯುವ, ಪ್ರಯತ್ನಿಸುವ ಮತ್ತು ಗೆಲ್ಲುವ ತಾಳ್ಮೆ ಮತ್ತು ಛಲ ಇರಬೇಕು, ಅಷ್ಟೇ! 

      ಮಾದರಿ ಸಂದರ್ಶನ ಹೀಗಿರುತ್ತದೆ 
      ಕರ್ನಾಟಕ ಲೋಕಸೇವಾ ಆಯೋಗ 2005-06ರಲ್ಲಿ ನಡೆಸಿದ ಯಶಸ್ವಿ ಕೆಎಎಸ್‌ ಅಭ್ಯರ್ಥಿಗಳ ಸಂದರ್ಶನದಲ್ಲಿ ಭಾಗವಹಿಸಿ ಸೂಪರಿಂಟೆಂಡೆಂಟ್‌ ಆಫ್ ಪ್ರಿಸನ್ಸ್‌ ಆಗಿ ಆಯ್ಕೆಯಾದ ರಮೇಶ್‌ ಅವರಿಗೆ ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ, ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುವಾಗಿನ ಅನುಭವಗಳು ಕುರಿತು ತುಂಬಾ ಸರಳವಾದ ಪ್ರಶ್ನೆಗಳನ್ನು ಮಾತ್ರ ಕೇಳಿದ್ದರಂತೆ! ತುಂಬಾ ಕಷ್ಟವಾದ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕಷ್ಟಪಟ್ಟು ಓದಿಕೊಂಡು, ಹೆದರುತ್ತಲೇ ಹಾಜರಾದವರು ಹಕ್ಕಿಯಂತೆ ಹಗುರಾಗಿ ಹಾರುತ್ತಾ ಬಂದರಂತೆ!
      ಇದೇ ಸರಣಿಯಲ್ಲಿ ಸಂದರ್ಶನ ಎದುರಿಸಿದ ಡಾ.ನೆಲ್ಲಿಕಟ್ಟೆ ಎಸ್‌. ಸಿದ್ದೇಶ್‌ ಅವರಿಗೆ ಅವರ ವಿದ್ಯಾಭ್ಯಾಸ, ಹಿನ್ನೆಲೆ, ಅನುಭವ ವಿವರಿಸುವಂತೆ ಕೇಳಿದರಂತೆ. ದಲಿತ ಕುಟುಂಬದಿಂದ ಕಡು ಬಡತನದಲ್ಲಿ ಬೆಂದುಬಂದಿದ್ದ ಡಾ. ಸಿದ್ದೇಶ್‌ ಅವರಿಗೆ ಸಂಶೋಧನೆಗಾಗಿ ಆಯ್ದುಕೊಂಡಿದ್ದ ಅಭಿನವ ಕಾಳಿದಾಸ ವಿದ್ವಾನ್‌ ಬಸವಪ್ಪ ಶಾಸಿŒಗಳ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ, ಸಾಹಿತ್ಯ ಸಂದರ್ಭದ ಬಗ್ಗೆ, ಮೆಚ್ಚಿನ ಲೇಖಕರ ಬಗ್ಗೆ ಮತ್ತು ತೀರಾ ಮುಖ್ಯವಾಗಿ ಅಂಬೇಡ್ಕರ್‌ ಅವರ ವಿಚಾರಧಾರೆಯ ಬಗ್ಗೆ ಹಾಗೂ ಅದರ ಪ್ರಭಾವ ಜನರ ಮೇಲೆ, ಸಿದ್ದೇಶ್‌ ಅವರ ಬದುಕಿನ ಮೇಲೆ ಆಗಿರುವ ಬಗ್ಗೆ ಸುದೀರ್ಘ‌ವಾಗಿ ಕೇಳಿದರಂತೆ. ಕೇಳಿದ 20 ಪ್ರಶ್ನೆಗಳಲ್ಲಿ 19 ಪ್ರಶ್ನೆಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರಿಸಿದ್ದಕ್ಕಾಗಿ ಶಹಭಾಸ್‌ಗಿರಿ ಸಿಕ್ಕಿದರೂ ಡಾ. ಸಿದ್ದೇಶ್‌ ಅವರು ಆ ಸಂದರ್ಶನದಲ್ಲಿ ಆಯ್ಕೆಯಾಗಲಿಲ್ಲ! 
      ಕಳೆದ ಕೆಲವು ವರ್ಷಗಳ ಹಿಂದೆ ಇದೇ ಕೆಎಎಸ್‌ ಸಂದರ್ಶನದಲ್ಲಿ ಭಾಗವಹಿಸಿದ್ದ ಖಜಾನೆ ಅಧಿಕಾರಿ ಅ.ನಾ. ಪ್ರಾಣೇಶ್‌ ಅವರು ಕಲೆ ಮತ್ತು ಕಾನೂನು ಅಭ್ಯಾಸ ಮಾಡಿದ ಅಭ್ಯರ್ಥಿಯಾಗಿದ್ದರೂ ಅವರಿಗೆ ಥರ್ಮಲ್‌ ಪವರ್‌ ಜನರೇಶನ್‌ ವಿಧಾನ ಕುರಿತು ತಿಳಿಸಿ ಎಂದು ಕೇಳಲಾಗಿತ್ತು! ಕಲಾ ವಿದ್ಯಾರ್ಥಿಗೆ ವಿಜ್ಞಾನದ ವಿಷಯದ ಪ್ರಶ್ನೆ ಎಂದು ಮೂಗಿನಮೇಲೆ ಬೆರಳಿಡಬೇಡಿ. ಆಂಗ್ಲ ಉಪನ್ಯಾಸಕರ ಹು¨ªೆಗೆ ಹಾಜರಾದ ಈ ಲೇಖಕನಿಗೆ ಬಯಾಪ್ಸಿ ಎಂದರೇನು? ಎಂದು ಜೀವವಿಜ್ಞಾನ, ಅದರಲ್ಲೂ ವೈದ್ಯಕೀಯ ವಿಜ್ಞಾನದ, ಪ್ರಶ್ನೆ ಕೇಳಲಾಗಿತ್ತು. ಜೊತೆಗೆ ಬಾಹ್ಯಾಂತರೀಕ್ಷಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು, ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕುರಿತ ಪ್ರಶ್ನೆಗಳನ್ನೂ ಕೇಳಲಾಗಿತ್ತು! ಇಬ್ಬರೂ ಕ್ವಿಜ್‌ ಸ್ಪರ್ಧೆಗಳಲ್ಲಿ ಛಾಂಪಿಯನ್‌ ಆಗಿದ್ದರಿಂದ ಆ ಪ್ರಶ್ನೆಗಳಿಗೆ ಸೂಕ್ತರೀತಿಯಲ್ಲಿ ಉತ್ತರಿಸಿದರೂ ಆ ಹು¨ªೆಗಳು ಮಾತ್ರ ಸಿಗಲಿಲ್ಲ. 

      ಯಶಸ್ವೀ ಸಂದರ್ಶನ ಹೀಗಿತ್ತು 
      ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2005ರ ಅಖೀಲ ಭಾರತ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಯಶಸ್ವಿಯಾದವರ ರ್‍ಯಾಂಕ್‌ ಪಟ್ಟಿ 2006ರ ಮೇ 12ರಂದು ಪ್ರಕಟವಾದಾಗ ಕರ್ನಾಟಕದ ಸುಮಾರು 18 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ರಾಷ್ಟ್ರಮಟ್ಟದಲ್ಲಿ 9ನೇ ರ್‍ಯಾಂಕ್‌ಗಳಿಸಿ ರಾಜ್ಯಕ್ಕೆ ಮೊದಲಿಗರಾದ ಚಿತ್ರದುರ್ಗ ಜಿÇÉೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಡಾ.ಎಸ್‌. ರಘುರಾಂ ಅವರನ್ನು ಸಂದರ್ಶಿಸಿ ನಿಮ್ಮ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಹೇಗಿತ್ತು? ಎಂದು ಪ್ರಶ್ನಿಸಿದಾಗ, ತುಂಬಾ ಆತ್ಮೀಯವಾಗಿತ್ತು. ಸಂದರ್ಶನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಗುಮುಖದಿಂದ ಮಾತಾಡಿಸಿದರು. ನಾನು ಓದಿದ ವಿಷಯಗಳು, ನನ್ನ ಕುಟುಂಬದ ವಿವರಗಳು, ನನ್ನ ಆಯ್ಕೆಯ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ನಾನು ಐಎಫ್ಎಸ್‌ ಆಯ್ಕೆ ಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದುದರಿಂದ ನಮ್ಮ ನೆರೆಹೊರೆಯ ದೇಶಗಳೊಂದಿಗೆ ನಮ್ಮ ದೇಶದ ಸಂಬಂಧ, ಅಂತಾರಾಷ್ಟ್ರೀಯ ಸಂಬಂಧ ಇವುಗಳ ಬಗ್ಗೆಯೇ ಹೆಚ್ಚು ಒತ್ತು ನೀಡಲಾಗಿತ್ತು. ಇಲ್ಲಿ ನೀವು ಕೇಳಲಾದ ಪ್ರಶ್ನೆಗೆ ಏನು ಉತ್ತರ ಹೇಳುತ್ತೀರಿ ಎನ್ನುವುದಕ್ಕಿಂತ ಎಷ್ಟು ಪ್ರಾಮಾಣಿಕವಾಗಿ ನಿಮಗೆ ಗೊತ್ತಿರುವುದನ್ನು ಹೇಳುತ್ತೀರಿ, ಸ್ಪಷ್ಟವಾಗಿ ನಿಮ್ಮ ನಿಲುವನ್ನು ವ್ಯಕ್ತಗೊಳಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಹತ್ತು ಪ್ರಶ್ನೆಗಳಿಗೆ ನೀವು ಒಂಬತ್ತಕ್ಕೆ ಸರಿ ಉತ್ತರ ನೀಡುವಲ್ಲಿ ಅಸಫ‌ಲರಾದರೂ ನೀಡುವ ಒಂದೇ ಪ್ರಶ್ನೆಯ ಉತ್ತರ ನಿಮ್ಮ ಧನಾತ್ಮಕ ಆಲೋಚನೆ, ನಿಮ್ಮ ವ್ಯಕ್ತಿತ್ವದ ಅನಾವರಣಗೊಳಿಸುವಂತಿದ್ದರೆ ಖಂಡಿತಾ ನೀವು ಆಯ್ಕೆಯಾಗುತ್ತೀರಿ. ನಿಮಗೆ ಕೇಳುವ ಪ್ರಶ್ನೆಗಳು ನಿಮ್ಮ ಸ್ವ-ವಿವರದೊಂದಿಗೆ ಲಗತ್ತಿಸಿರುವ ವಿವರಗಳನ್ನು ಆಧರಿಸಿಯೇ ಇರುತ್ತವೆ ಆದ್ದರಿಂದ ಅದಕ್ಕೆ ಪೂರಕವಾಗುವಂತೆ ನೀವು ನಿಮ್ಮ ಸಿದ್ಧತೆ ನಡೆಸಿದ್ದರೆ ಸಾಕು. ಕೇವಲ ಕ್ವಿಜ್‌ ರೀತಿಯಲ್ಲಿ ಸಂದರ್ಶನ ಇರುವುದಿಲ್ಲ. ನಿಮ್ಮ ವ್ಯಕ್ತಿಗತ ನಿಲುವುಗಳು, ಆಸಕ್ತಿ, ಅಭಿವ್ಯಕ್ತಿಗಳು, ನಿಮ್ಮ ಪ್ರಾಮಾಣಿಕ ವರ್ತನೆ ಎಲ್ಲವೂ ಇಲ್ಲಿ ಲೆಕ್ಕಕ್ಕೆ ಬರುವುದರಿಂದ ಯಾವುದೇ ಗಡಿಬಿಡಿಗೆ ಒಳಗಾಗದೆ ಸಂದರ್ಶನ ಎದುರಿಸಿ ಯಶಸ್ವಿಯಾಗಬಹುದು ಎಂದರು. 
      ಅದೇ ವರ್ಷ ಐಎಎಸ್‌ನಲ್ಲಿ 32ನೇ ಸ್ಥಾನ ಪಡೆದಿರುವ ಆರ್‌. ಸಂಗೀತಾ ಕಂಪ್ಯೂಟರ್‌ ಸೈನ್ಸ್‌ ಪದವೀಧರೆ. ಜೊತೆಗೆ ಹಣಕಾಸು ವಿಷಯದಲ್ಲಿ ಎಂಬಿಎ ಮತ್ತು ಕಾನೂನು ವ್ಯಾಸಂಗವನ್ನೂ ಮಾಡಿದವರು. ಇವರಿಗೆ ಸಂದರ್ಶನದಲ್ಲಿ ಕೇಳಿದ ಮೊದಲ ಪ್ರಶ್ನೆ ಇಷ್ಟೊಂದು ವಿವಿಧ ಕ್ಷೇತ್ರಗಳ ವ್ಯಾಸಂಗ ಯಾಕೆ ಮಾಡಿದ್ದು? ಅಂತ. ಉಳಿದಂತೆ ಅವರ ಸ್ವ-ವಿವರ, ಹಿನ್ನೆಲೆ, ಊರು, ರಾಜ್ಯದ ಪ್ರಶ್ನೆಗಳಿದ್ದವಂತೆ. ನಾಲ್ಕನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರಿಂದ ಆ ಎÇÉಾ ಪ್ರಯತ್ನಗಳಲ್ಲಿಯೂ ಒಂದೇ ವಿಷಯಗಳನ್ನು ಆಯ್ದಕೊಂಡಿದ್ದರೆ? ಎಂದು ಕೇಳಿದರಂತೆ. ಕೊನೆಯದಾಗಿ ಈಶಾನ್ಯ ರಾಜ್ಯಗಳ ಜಿÇÉೆಯೊಂದರ ಜಿÇÉಾಧಿಕಾರಿಯಾಗಿ ನೇಮಕವಾದರೆ ಅಲ್ಲಿನ ಜನರಲ್ಲಿ ಪ್ರಚಲಿತವಿರುವ ಪರಿವರ್ತಿತ ಬೇಸಾಯ ಪದ್ಧತಿಯನ್ನು ಬದಲಾಯಿಸಲು ಏನು ಪ್ರಯತ್ನ ಮಾಡುವಿರಿ? ಎಂಬುದಾಗಿತ್ತಂತೆ. 
      2003ರಲ್ಲಿ 6ನೇ ರ್‍ಯಾಂಕ್‌ ಗಳಿಸಿದ ಮಯೂರ್‌ ಮಾಹೇಶ್ವರಿಯವರಿಗೆ ಮಾತ್ರ ಕೇಳಿದ ಪ್ರಶ್ನೆಗಳು ಸಾಮಾನ್ಯ ಜ್ಞಾನದ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದವು. ಮೊದಲ ಪ್ರಶ್ನೆ ಭಾರತದ ಜವಳಿ ಉದ್ಯಮ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಈ ಉದ್ಯಮ ಬೀರುತ್ತಿರುವ ಪ್ರಭಾವ, ಅದರ ಸಾಧಕ-ಬಾಧಕ ಗಳನ್ನು ಕುರಿತು ಇತ್ತು. ಸಂವಿಧಾನದ 356 ನೇ ವಿಧಿ ಮತ್ತು ಅದರ ಸದುಪಯೋಗ, ದುರುಪಯೋಗ ಕುರಿತು ಸದಸ್ಯರೊಬ್ಬರು ಪ್ರಶ್ನೆ ಮಾಡಿದರಂತೆ. ಹಿಂದುಳಿದ ರಾಜ್ಯಗಳಲ್ಲಿ ಹೆಣ್ಣು ಶಿಶುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಸಮಸ್ಯೆಯ ಬಗ್ಗೆ ಮಹಿಳಾ ಸದಸ್ಯರೊಬ್ಬರು ಪ್ರಶ್ನೆ ಕೇಳಿದರು. ಆಗ ನಡೆಯುತ್ತಿದ್ದ ಅಮೇರಿಕಾ ಮತ್ತು ಇರಾಕ್‌ ಕೊಲ್ಲಿ ಯುದ್ಧದ ಕುರಿತು ಪ್ರಶ್ನೆ ಇತ್ತು. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಅಸಮತೋಲನ, ಕೊಳ್ಳುಬಾಕ ಸಂಸ್ಕೃತಿ, ಜಾಗತೀಕರಣದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೊನೆಯಲ್ಲಿ ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ನಡುವೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಕುರಿತು ವಿವರಿಸಲು ಕೇಳಿದರಂತೆ.(ಆಗ ಆ ಎರಡೂ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿದ್ದರು.)
      ಈ ಮಾತುಗಳನ್ನು ಓದುವಾಗ ರಾಷ್ಟ್ರದಲ್ಲಿಯೇ ಉನ್ನತ ಹು¨ªೆಗೆ ನಡೆಸಲಾದ ವ್ಯಕ್ತಿತ್ವ ಪರೀಕ್ಷೆಯ(ಸಂದರ್ಶನದ) ಸ್ಪಷ್ಟ ಚಿತ್ರಣ ದೊರೆತಂತಾಗುತ್ತದೆ, ಅಲ್ಲವೇ? ಬಹುಶಃ ಇದೇ ಮಾದರಿಯಲ್ಲಿಯೇ ನಮ್ಮ ದೇಶದ ಎÇÉಾ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸುವ ಸಂದರ್ಶನಗಳು ಇರುತ್ತವೆ ಎನಿಸುತ್ತದೆ. ಸಂದರ್ಶಕರ ಸಮಿತಿಯು ವಿವಿಧ ಕ್ಷೇತ್ರಗಳ ದಿಗ್ಗಜರನ್ನು ಪ್ರತಿನಿಧಿಸುವುದರಿಂದ, ಆಯ್ಕೆಯ ಮಾನದಂಡಗಳೂ ಪೂರ್ವ ನಿರ್ಧಾರಿತವಾಗಿರುವುದರಿಂದ, ವಸ್ತುನಿಷ್ಟವಾಗಿಯೂ ವ್ಯಕ್ತಿನಿಷ್ಟವಾಗಿಯೂ ನಡೆಯುತ್ತವೆ. ಇಂಗ್ಲೆಂಡಿನ ಸ್ಕಾಟ್ಲೆಂಡ್‌ಯಾರ್ಡ್‌, ಅಮೇರಿಕಾದ ಪೆಂಟಗನ್‌ ಮತ್ತು ರಷ್ಯಾದ ಕೆಜಿಬಿಗಳಿಗೆ ನಡೆಯುವ ನೇಮಕಾತಿ ಸಂದರ್ಶನಗಳ ಸಾಲಿನಲ್ಲಿಯೇ ಭಾರತದ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸಂದರ್ಶನಗಳು ನಿಲ್ಲುತ್ತಿವೆ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನಡೆಯುತ್ತಿದ್ದು ವಿಶ್ವಾಸಾರ್ಹತೆಗಳಿಸಿವೆ. ಯಶಸ್ವಿ ಅಭ್ಯರ್ಥಿಗಳೇ, ಗುಡ್‌ಲಕ್‌! 
      ಹೆಚ್ಚಿನ ಮಾಹಿತಿಗೆ ನೋಡಿ: ಸಂದರ್ಶನ- ವ್ಯಕ್ತಿತ್ವದ ಸಮಗ್ರ ದರ್ಶನ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

      ಬಾಕ್ಸ್‌ 
      ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ತಡೆಗಳೆಲ್ಲ ನಿವಾರಣೆ 

      ಕಳೆದ ಗುರುವಾರ ಮಧ್ಯಾಹ್ನ ಲೋಕಸಭೆಯಲ್ಲಿ ಸಿಬ್ಬಂದಿ ಖಾತೆ ಸಚಿವ ವಿ. ನಾರಾಯಣ ಸ್ವಾಮಿಯವರು ಚರ್ಚೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ವಿಷಯದಲ್ಲಿ ತಂದಿರುವ ಕಟ್ಟುನಿಟ್ಟಿನ ಬದಲಾವಣೆಯನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಮಾರ್ಚ್‌ 15ರಂದು ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಯೋಗದೊಂದಿಗೆ ಚರ್ಚಿಸಿ ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. 
      - ಅಭ್ಯರ್ಥಿಯು ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು. 
      - ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿಯನ್ನು ಹಾಗೂ ಪದವಿಯಲ್ಲಿ ಅದೇ ಭಾಷಾ ಮಾಧ್ಯದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದ್ದು ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ ಇಚ್ಛೆಗೆ ಬಿಡಲಾಗಿದೆ. 
      - ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ(22 ಸಂವಿಧಾನ ಅನುಮೋದಿಸಿದ ಭಾಷೆಗಳು ಮತ್ತು ಇಂಗ್ಲಿಷ್‌) ಇವುಗಳಲ್ಲಿ ಯಾವುದೇ ಒಂದನ್ನು ಆಯ್ದುಕೊಳ್ಳಬಹುದು. ಪದವಿಯಲ್ಲಿ ಓದಿದ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ ಇಲ್ಲ. 
      - ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್‌ ಕಾಂಪ್ರಹೆನÒನ್‌ ಮತ್ತು ಪ್ರಸಿ(ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಹಾಗೆಯೇ ಈ ಮೊದಲು ಇದ್ದ ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್‌ ಪತ್ರಿಕೆಗಳು ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆಯೇ ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ. 
      ಅಂತೂ ಗುಡ್ಡ ಅಗೆದು ಇಲಿ ಹಿಡಿದರು ಎಂಬಂತೆ ವರ್ಷಗಟ್ಟಲೇ ಉನ್ನತ ಅಧ್ಯಯನ ಸಮಿತಿ ನಡೆಸಿದ ಸಂಶೋಧನೆಯ ಫ‌ಲಶೃತಿಯನ್ನು ಭಾವನಾತ್ಮಕ ಒತ್ತಡಗಳಿಗೆ ಬಲಿಕೊಟ್ಟು ಉನ್ನತ ಶಿಕ್ಷಣದ ಆಶಯವನ್ನೇ ಅಣಕಿಸುವ ಕಾರ್ಯ ನಡೆದಿದೆ. ಎರಡು ಐಚ್ಛಿಕ ವಿಷಯಗಳ ಬದಲಿಗೆ ಒಂದೇ ಐಚ್ಛಿಕ ವಿಷಯ ಮತ್ತು ಎರಡು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳು ಎಂಬುದಷ್ಟೇ ಹೊಸ ಬದಲಾವಣೆಯ ಹೂರಣ! 
      ಅದಕ್ಕಾಗಿ ಕೋಟಿ ಕೋಟಿ ಹಣ ವ್ಯಯಿಸಬೇಕಿತ್ತೇ?

KAS Interview 2013 How to Face it - Article in Udayavani Josh 26 March 2013

Monday, March 25, 2013

UPSC Mains 2013 Syllabus Changed - Article in Prajavani Shikshana 25 March 2013




 
ಕೇಂದ್ರ ನಾಗರಿಕ ಸೇವೆ

ಬದಲಾಗಲಿದೆ ಪರೀಕ್ಷಾ ಮಾದರಿ

ಕೇಂದ್ರ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್‌ಗಳ (ಕೇಂದ್ರ ನಾಗರಿಕ ಸೇವೆ) ನೇಮಕಾತಿಗಾಗಿ ನಡೆಸುವ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿ ಈ ವರ್ಷದಿಂದ ಬದಲಾಗಲಿದೆ. ಆದರೆ ಈ ಬದಲಾವಣೆಯ ಕೆಲವು ಅಂಶಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಅದರಲ್ಲಿ ಕೊಂಚ ಮಾರ್ಪಾಡುಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿವೃತ್ತ ಅಧ್ಯಕ್ಷ ಪ್ರೊ. ಅರುಣ್ ಎಸ್. ನಿಗವೇಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು, ಮುಖ್ಯ ಪರೀಕ್ಷೆಯ ಸುಧಾರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಶಿಫಾರಸುಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಫೆ. 27ರಂದು ಒಪ್ಪಿಗೆ ಸೂಚಿಸಿದ್ದರು. ಈ ಶಿಫಾರಸುಗಳಿಗೆ ಪೂರಕವಾಗಿಯೇ ಈ ಬಾರಿಯ ಮುಖ್ಯ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ, ಪೂರ್ವಭಾವಿ ಪರೀಕ್ಷೆಗಾಗಿ ಮಾರ್ಚ್ 4ರಂದು ಆಯೋಗ ಅಧಿಸೂಚನೆಯನ್ನೂ ಹೊರಡಿಸಿದೆ.
ಆದರೆ, ಹೊಸ ಶಿಫಾರಸುಗಳ ಅನ್ವಯ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆ ವಿಷಯದಲ್ಲಿ ತರಲು ಹೊರಟಿದ್ದ ಕಟ್ಟುನಿಟ್ಟಿನ ಬದಲಾವಣೆಗಳು ಪರೀಕ್ಷೆ ಆಕಾಂಕ್ಷಿಗಳಿಗೆ ಆಘಾತ ಉಂಟು ಮಾಡಿವೆ. ನೂತನ ಬದಲಾವಣೆಗಳನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಆಗ್ರಹಿಸಿ ಮಾರ್ಚ್ 15ರಂದು ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ `ಹೊಸ ಪಠ್ಯಕ್ರಮದಲ್ಲಿ ಕೆಲ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ' ಎಂದು ಸಿಬ್ಬಂದಿ ಖಾತೆ ಸಚಿವ ವಿ.ನಾರಾಯಣ ಸ್ವಾಮಿ ಇತ್ತೀಚೆಗೆ ಲೋಕಸಭೆಗೆ ತಿಳಿಸಿದ್ದಾರೆ. ಆದರೆ ಈ ಸಂಬಂಧ ಆಯೋಗ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಾಗಿದೆ.
ಹೀಗಾಗಿ ಇತ್ತೀಚೆಗೆ ಆಯೋಗ ಪ್ರಕಟಿಸಿರುವ ಹೊಸ ತೀರ್ಮಾನಗಳು ಮತ್ತು ಅದರಲ್ಲಿ ಆಗಬಹುದಾದ ಪರಿಷ್ಕೃತ ಬದಲಾವಣೆಗಳನ್ನು ಕೆಳಗೆ ಕೊಡಲಾಗಿದೆ. (ಆಯೋಗದಿಂದ ಪ್ರಕಟಣೆ ಹೊರಬಿದ್ದ ನಂತರವಷ್ಟೇ ಪರಿಷ್ಕೃತ ಬದಲಾವಣೆಗಳು ಅಧಿಕೃತಗೊಳ್ಳಲಿವೆ. ಈ ಲೇಖನ ಪ್ರಕಟವಾಗುವ ಹೊತ್ತಿಗೆ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ)
ಅಸಮಾಧಾನಕ್ಕೆ ಕಾರಣವಾಗಿರುವ ಹೊಸ ತೀರ್ಮಾನಗಳು ಹೀಗಿವೆ
1. ಅರ್ಹತಾ ಪರೀಕ್ಷೆಯಾಗಿದ್ದ ಕನ್ನಡ ಅಥವಾ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳನ್ನು ತೆಗೆದುಹಾಕಲಾಗಿದೆ.
2. ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ ಇಂಗ್ಲಿಷ್ ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ವಿಷಯವನ್ನು ಕಡ್ಡಾಯ ಮಾಡಲಾಗಿದೆ.
3. ಎರಡು ಐಚ್ಛಿಕ ವಿಷಯಗಳ ಬದಲಿಗೆ ಕೇವಲ ಒಂದನ್ನು ಆಯ್ದುಕೊಳ್ಳುವ ಅವಕಾಶ ಇದೆ.
4.ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳನ್ನು ಬರೆಯಬೇಕು.
5. ಪದವಿ ಹಂತದಲ್ಲಿ ಓದಿರುವ ಭಾಷಾ ಸಾಹಿತ್ಯ ವಿಷಯವನ್ನು ಇಲ್ಲೂ ಆಯ್ದುಕೊಳ್ಳಬಹುದು. ಇತರ ಪದವಿಯವರು ಭಾಷಾ ಸಾಹಿತ್ಯ ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ.
6. ಪದವಿ ಹಂತದಲ್ಲಿ ಕನ್ನಡ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡಿದ್ದರೆ ಮಾತ್ರ ಆ ಭಾಷಾ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಬಹುದು.  ಕನಿಷ್ಠ 25 ಅಭ್ಯರ್ಥಿಗಳು ಹೀಗೆ ಒಂದು ಭಾಷೆಯ ಮಾಧ್ಯಮವನ್ನು ತೆಗೆದುಕೊಂಡಲ್ಲಿ ಮಾತ್ರ ಅವಕಾಶ ಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಅವರು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.
7. ಇಂಗ್ಲಿಷ್ ಹೊರತುಪಡಿಸಿ ವಿದೇಶಿ ಭಾಷಾ ಸಾಹಿತ್ಯ ಪತ್ರಿಕೆಗಳನ್ನು ರದ್ದು ಮಾಡಲಾಗಿದೆ. ಹಾಗೆಯೇ ಅತ್ಯಂತ ಸುಲಭವಾಗಿದ್ದ `ಪಾಲಿ ಭಾಷಾ ಸಾಹಿತ್ಯ' ಪತ್ರಿಕೆ ಕೂಡ ರದ್ದಾಗಿದೆ.
8. ಸಂದರ್ಶನಕ್ಕೆ 1: 3ರ ಪ್ರಮಾಣದ ಬದಲು ಇನ್ನು ಮುಂದೆ 1: 2 ಪ್ರಮಾಣದಲ್ಲಿ ಕರೆ ಪತ್ರ ಕಳುಹಿಸಲಾಗುತ್ತದೆ.
ಸಂಭವನೀಯ ಪರಿಷ್ಕೃತ ಬದಲಾವಣೆಗಳ ವಿವರ
1. ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು.
2. ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿ ಹಾಗೂ ಪದವಿಯಲ್ಲಿ ಅದೇ ಭಾಷಾ ಮಾಧ್ಯಮದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ ಇಚ್ಛೆಗೆ ಬಿಡಲಾಗಿದೆ. 
3. ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ (ಸಂವಿಧಾನ ಅನುಮೋದಿಸಿದ 22 ಭಾಷೆಗಳು ಮತ್ತು ಇಂಗ್ಲಿಷ್) ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಪದವಿಯಲ್ಲಿ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ ಇಲ್ಲ.
4. ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್ ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಈ ಮೊದಲು ಇದ್ದ ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್ ಪತ್ರಿಕೆಗಳು ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆ ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ. 
ಒಂದು ವೇಳೆ ಮೇಲಿನ ಈ ಎಲ್ಲ ಉದ್ದೇಶಿತ ಬದಲಾವಣೆಗಳು ಜಾರಿಗೆ ಬಂದಿದ್ದೇ ಆದಲ್ಲಿ, ಪರೀಕ್ಷೆ ಬರೆಯುವ ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಪೂರ್ವಭಾವಿ ಪರೀಕ್ಷೆ
2013ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಿಗೆ ಇದೇ ಮಾರ್ಚ್ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕೇಂದ್ರ ಗೆಜೆಟ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಬಿದ್ದಿದೆ. ಪರೀಕ್ಷೆಗಳು ಮೇ 26ರಂದು ನಡೆಯಲಿವೆ. ಪೂರ್ವಭಾವಿ ಪರೀಕ್ಷೆಯ ಮಾದರಿ ಎರಡು ವರ್ಷಗಳ ಹಿಂದಷ್ಟೇ ಬದಲಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಹೊಸ ಮಾರ್ಪಾಡುಗಳು ಈ ಪರೀಕ್ಷೆಗೆ ಅನ್ವಯಿಸುವುದಿಲ್ಲ.
ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರು ಈ ಬಾರಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಗೆ ಕರೆದಿರುವ ಅರ್ಜಿಯನ್ನೇ ಸಲ್ಲಿಸಬೇಕು. ಅಭ್ಯರ್ಥಿಗಳು ಸಿವಿಲ್ ಸರ್ವೀಸಸ್ (ಸುಮಾರು 1000+ ಹುದ್ದೆಗಳು) ಮತ್ತು ಐಎಫ್‌ಎಸ್‌ನಲ್ಲಿ (ಸುಮಾರು 85 ಹುದ್ದೆಗಳು) ಯಾವುದಾದರೂ ಒಂದನ್ನು ಅಥವಾ ಎರಡನ್ನೂ ಆಯ್ಕೆ ಮಾಡಿಕೊಳ್ಳಬಹುದು.  ಎರಡನ್ನೂ ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಿವಿಲ್ ಸರ್ವೀಸಸ್ ಮತ್ತು ಫಾರೆಸ್ಟ್ ಸರ್ವೀಸಸ್ ಮುಖ್ಯ ಪರೀಕ್ಷೆಗಳನ್ನು ಪ್ರತ್ಯೇಕ ದಿನಾಂಕಗಳಂದು ನಡೆಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ
ಪತ್ರಿಕೆ 1: ಸಾಮಾನ್ಯ ಜ್ಞಾನ- 200 ಅಂಕಗಳು- ಅವಧಿ ಎರಡು ಗಂಟೆ

*ಪ್ರಸಕ್ತ ವಿದ್ಯಮಾನ- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗತಿಗಳು.
*ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ.
*ಭಾರತ ಮತ್ತು ಪ್ರಪಂಚದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶ.
*ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ- ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
*ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ- ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ವಿವಿಧ ಯೋಜನೆಗಳು ಇತ್ಯಾದಿ.
*ಪರಿಸರ ಅಧ್ಯಯನ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಮುಂತಾದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. (ಈ ವಿಷಯಗಳಲ್ಲಿ ತುಂಬಾ ಆಳವಾದ ಪರಿಣತಿಯ ಅಗತ್ಯ ಇಲ್ಲ.)
*ಸಾಮಾನ್ಯ ವಿಜ್ಞಾನ.
ಪತ್ರಿಕೆ 2: ಸಿವಿಲ್ ಸರ್ವೀಸ್ ಆ್ಯಪ್ಟಿಟ್ಯೂಡ್- ಅಂಕ 200 - ಅವಧಿ ಎರಡು ಗಂಟೆ
*ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು (ಕಾಂಪ್ರಿಹೆನ್ಷನ್)
*ಸಂವಹನ ಕೌಶಲ ಮತ್ತು ವೈಯಕ್ತಿಕ ಕೌಶಲ (ಇಂಟರ್‌ಪರ‌್ಸನಲ್ ಸ್ಕಿಲ್ಸ್)
*ತಾರ್ಕಿಕ ಆಲೋಚನೆ, ತುಲನಾತ್ಮಕ ಸಾಮರ್ಥ್ಯ
*ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ
*ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
*ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ್ದು)
*ಇಂಗ್ಲಿಷ್ ಭಾಷೆಯ ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.
*ಇಂಗ್ಲಿಷ್ ಕಾಂಪ್ರಿಹೆನ್ಷನ್
ಪರೀಕ್ಷೆ ಇಲ್ಲಿ ನಡೆಯಲಿದೆ
ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆಯಲಿರುವ ಕೇಂದ್ರಗಳು ಬೆಂಗಳೂರು ಮತ್ತು ಧಾರವಾಡ. ಅಂಧ ಅಭ್ಯರ್ಥಿಗಳು ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಲಖನೌ, ಡಿಸ್‌ಪುರ್ ಮತ್ತು ಮುಂಬೈ ಕೇಂದ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬೇಕು.
 
ಹೆಚ್ಚಿನ ವಿವರಗಳಿಗೆ ನೋಡಿ: www.upsc.gov.in/exams/exams.htm
                                  www.upsconline.nic.in
 UPSC Mains 2013 Syllabus Changed - Article in Prajavani Shikshana 25 March 2013

Sunday, March 24, 2013

Belagere Krishna Shastri in News today












ಸಮಾಜಕ್ಕಾಗಿ ಬದುಕು ಮುಡಿಪಾಗಿಟ್ಟ ಕ್ಷೀರಸಾಗರ

ಚಳ್ಳಕೆರೆ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಮನ್ನಣೆ ಗಳಿಸಿದ ಕೆಲವೇ ಸಾಹಿತಿಗಳಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಯವರು ಒಬ್ಬರಾಗಿದ್ದಾರೆ. ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಜನಿಸಿದ ಇವರು ಸಾಹಿತ್ಯವನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಕೃಷಿ ಬದುಕಿನೊಂದಿಗೆ ಶಿಕ್ಷಣ ಕ್ಷೇತ್ರವನ್ನು ಸಹ ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸಿದವರು.ವಿದ್ವಾಂಸರು ಆಶು ಕವಿಗಳಾದ ಚಂದ್ರಶೇಖರಶಾಸ್ತ್ರಿ, ಅನ್ನಪೂರ್ಣಮ್ಮ ದಂಪತಿ ಪುತ್ರರಾದ ಇವರು ಹಿರಿಯೂರಿನ ಮೋಕ್ಷಗೊಂಡಂ ಕುಟುಂಬ ವರ್ಗದ ಪದ್ಮಾವತಿ ಎಂಬುವರನ್ನು ವಿವಾಹವಾಗಿದ್ದರು. ಇವರ ಅಣ್ಣ ಸೀತಾರಾಮಶಾಸ್ತ್ರಿ ಗಣಿತ ಪ್ರಾಧ್ಯಾಪಕ ಹಾಗೂ ನಾಟಕಕಾರರಾಗಿದ್ದರು.ಕ್ಷೀರಸಾಗರ: ಕ್ಷೀರಸಾಗರ ಎಂಬ ಕಾವ್ಯ ನಾಮದಲ್ಲಿ ಇವರ ಅನೇಕ ಸಾಹಿತ್ಯ ಕೃತಿಗಳು ಪ್ರಕಟಗೊಂಡಿವೆ. ಅಕ್ಕ ಜಾನಕಮ್ಮ ಕವಯತ್ರಿಯಾತ್ರಿ, ತಂಗಿ ಪಾರ್ವತಮ್ಮ ಸಹ ಕಥೆಗಾರ್ತಿಯಾಗಿದ್ದರು.  ಬೆಂಗಳೂರಿನಲ್ಲಿ ಬಿ.ಎಡ್. ಮುಗಿಸಿದ ಇವರು ಪೋಷಕರ ಒತ್ತಾಯಕ್ಕೆ ಮಣಿದು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡರು. ಇದಕ್ಕೂ ಮುನ್ನ ಬೆಂಗಳೂರಿನ ಎಚ್.ಎ.ಎಲ್.ನಲ್ಲಿ ಸ್ವಲ್ಪ ಕಾಲ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು.ಶಿಕ್ಷಕರಾಗಿ ಸೇವೆ: ತಾಲೂಕಿನ ಹೆಗ್ಗೆರೆ, ಮೀರಾಸಾಬಿಹಳ್ಳಿ, ಚಿತ್ರದುರ್ಗ, ದೇವನೂರು ಮತ್ತು ಕಳಸದಲ್ಲಿ ಶಿಕ್ಷಕರಾಗಿ ಅವರು ಸೇವೆ ಸಲ್ಲಿಸಿದ್ದರು. ಹೆಗ್ಗೆರೆಯಲ್ಲಿ ತಮ್ಮ ವೃತ್ತಿಯ ಜೊತೆಗೆ ಗ್ರಾಮೀಣ ಜನರನ್ನು ಜಾಗೃತಗೊಳಿಸಿ ರಂಗ ಮಂದಿರ, ಶಿವಾಲಯ, ಶಾಲಾ ಕಟ್ಟಡ ನಿರ್ಮಾಣ ಹಾಗೂ ಮುಖ್ಯರಸ್ತೆಯಿಂದ ಗ್ರಾಮದವರೆಗೆ ರಸ್ತೆಯನ್ನು ಸಹ ನಿರ್ಮಿಸಿಕೊಡುವಲ್ಲಿ ಶ್ರಮಿಸಿದರು.ಮರು ಮದುವೆಗೆ ನಕಾರ: ಮದುವೆಯಾದ ನಂತರ ಹೆಂಡತಿ ಪದ್ಮಾವತಿ ಗಂಡು ಮಗುವಿಗೆ ಜನ್ಮ ನೀಡಿ ಕೆಲ ಸಮಯದ ನಂತರ ಮೃತಪಟ್ಟರು. ಮಗುವೂ ಸಹ ಮರಣ ಹೊಂದಿದ ಹಿನ್ನೆಲೆಯಲ್ಲಿ ನೊಂದ ಶಾಸ್ತ್ರಿಗಳು ಕೆಲ ಸಮಯ ನೋವಿನಿಂದಲೇ ಕಾಲ ಕಳೆದರು. ಮನೆಯಲ್ಲಿ ಮರು ಮದುವೆಗೆ ಒತ್ತಾಯ ಹೆಚ್ಚಾದಾಗ ತಮ್ಮ ಹಲ್ಲುಗಳನ್ನು ಕೀಳಿಸಿ ನಾನೀಗ ಮುದುಕನಾಗಿದ್ದು, ಯಾರು ಹೆಣ್ಣು ಕೊಡುತ್ತಾರೆಂದು ಗೇಲಿ ಮಾಡಿದ ಶಾಸ್ತ್ರಿಗಳು ಹಿಮಾಲಯಕ್ಕೆ ತೆರಳಿ ಅಲ್ಲಿನ ಮುಕಂದೂರು ಸ್ವಾಮಿಗಳ ಆಶ್ರಮದಲ್ಲಿ ಆಶ್ರಯ ಪಡೆದು ತತ್ವ ಜ್ಞಾನದ ಬಗ್ಗೆ ಅಧ್ಯಯನ ನಡೆಸಿದರು.  ನಂತರದ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರದೇಶದಲ್ಲಿ ಗ್ರಾಮೀಣ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ವಾತಾವರಣ ಉಂಟಾಗಿ ಉತ್ತಮ ಶಿಕ್ಷಣ ಗ್ರಾಮದಿಂದ ಬಹುದೂರ ಹೋಗುವ ಸ್ಥಿತಿಯನ್ನು ಗಮನಿಸಿ ತಮ್ಮದೇ ಆದ ಜಮೀನಿನಲ್ಲಿ ಶಾಲೆಯನ್ನು ಕಟ್ಟಲು ಪ್ರಾರಂಭಿಸಿದರು.  ಸಂಶೋಧಕರಿಗೆ ನೆರವು: ಪ್ರಾರಂಭದಲ್ಲಿ ಪ್ರಾಥಮಿಕ ಶಾಲೆಯನ್ನು ನಿರ್ಮಿಸಿ ಕಾಲ ಕ್ರಮೇಣ ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಈಗ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಗಿದೆ. ಶಾಸ್ತ್ರಿಯವರು ಸಂಶೋಧಕರಿಗೆ ನೆರವನ್ನು ನೀಡುವುದರಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದ್ದರು. ಜಾನಪದ ಜಂಗಮ ಎಸ್.ಕೆ. ಕರೀಂಖಾನ್, ತಾಲೂಕಿನ ಜಾನಪದ ಸಿರಿಯಾದ ಸಿರಿಯಜ್ಜಿಯವರನ್ನು ಜನತೆಗೆ ಪರಿಚಯಿಸಿದ ಕೀರ್ತಿ ಕೃಷ್ಣಶಾಸ್ತ್ರಿಯವರದು.ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರು. 1926 ರಲ್ಲಿ ಮೈಸೂರು ಸಂಸ್ಥಾನದ ಅತಿಥಿಯಾಗಿ ಆಗಮಿಸಿದ್ದ ಮಹಾತ್ಮಾ ಗಾಂಧೀಜಿವರನ್ನು ಭೇಟಿ ಮಾಡಿ ಅವರೊಂದಿಗೆ ಕಾರ್ಯ ನಿರ್ವಹಿಸಿದವರು. ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದರು.ಕವನ ಸಂಕಲನಗಳು:  ಯೇಗ್ದಾಗೆಲ್ಲಾ ಐತೆ, ಹಳ್ಳಿ ಚಿತ್ರ, ಹಳ್ಳಿ ಮೇಷ್ಟ್ರು, ತುಂಬಿ ಕವನ ಸಂಕಲನ, ಮರೆಯಲಾದೀತೆ, ಸಾಹಿತಿಗಳ ಸ್ಮೃತಿ ಮುಂತಾದ ಲೇಖನಗಳು ಕೃತಿಯ ರೂಪದಲ್ಲಿ ಪ್ರಕಟಗೊಂಡಿರುತ್ತವೆ. ಇನ್ನೂ ಹಲವಾರು ನಾಟಕಗಳು ಪ್ರಕಟಣೆಯನ್ನು ಕಾಣಬೇಕಾಗಿದೆ.- ಕೆ.ಎಸ್. ರಾಘವೇಂದ್ರ
 
Ksheera Sagara is the Pen Name of Sri Belagere Seetharama Shastri. 

Saturday, March 23, 2013

Belagere Krishna Shastri (22.05.1918 - 22.03.2013)






Belagere Krishna Shastri (22.05.1918 - 22.03.2013)
 
Let the The Great Soul Rest in Peace.
We Miss You Sir, Really.
Sri Shastriji's body will be kept at Tumkur (Till 12.30 PM), Hiriyuru (Till 4 PM), Challakere (Till 6 PM), Belagere-Narayanapura (Till 10.30 AM on 24.03.2013)
Cremation will be at Belagere-Narayanapura, Challkere Taluk, at 10.30 AM
The Mentor finds a place with his Mentor.




Monday, March 18, 2013

Dairy Doctor Hori Master by Dr Ganesh Neelesara - Book Introduction in Vijayavani 18 March 2013






Dairy Doctor Hori Master by Dr Ganesh Neelesara - Book Introduction in Vijayavani 18 March 2013
Book on Experiences of a Veterinary Doctor James Harriet
Publisher - Bhoomi Books, 150, 1st Main Road, Sheshadripuram, Bangalore - 560 020
Ph.: 08023565885  Mob. 9449177628   Price Rs.120
Images / Drawings by Shwetha Adukala   Cover Page by Nagesh Hegde





























ಪಶುವೈದ್ಯಕೀಯ ಲೋಕದ ಹಸುರು ಹೊನ್ನು - ಡೇರಿ ಡಾಕ್ಟರ್ ಹೋರಿ ಮಾಸ್ಟರ್


ಕೃತಿ            : ಡೇರಿ ಡಾಕ್ಟರ್ ಹೋರಿ ಮಾಸ್ಟರ್ (ಪಶುವೈದ್ಯರ ನೈಜ ಅನುಭವ ಕುರಿತ ಜೇಮ್ಸ್ ಹೆರಿಯಟ್ ಕಥಾನಕ)
ಮೂಲ ಲೇಖಕರು    : ಜೇಮ್ಸ್ ಹೆರಿಯಟ್
ಕನ್ನಡ ರೂಪಾಂತರ    : ಡಾ. ಗಣೇಶ್ ಎಂ. ನೀಲೇಸರ
ಪ್ರಕಾಶಕರು        : ಭೂಮಿ ಬುಕ್ಸ್, 150/1ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು  
ಪ್ರಕಟಣೆಯ ವರ್ಷ     : 2012 ಮೊದಲ ಮುದ್ರಣ,
ಪುಟಗಳು        : 160
ಬೆಲೆ            : 120
ಮುಖಪುಟ ವಿನ್ಯಾಸ    : ನಾಗೇಶ ಹೆಗಡೆ
ರೇಖಾಚಿತ್ರಗಳು        : ಶ್ವೇತಾ ಆಡುಕಲಾ


ವೆಟಿಕೊ (ಪಶುವೈದ್ಯ ವಿದ್ಯಾಥರ್ಿ) ಸುಮಂತ್ ತರಗತಿಗಳನ್ನು ಮುಗಿಸಿ ಮನೆಗೆ ಬಂದಾಗ ಅವನ ಏಪ್ರನ್ ತುಂಬಾ ಹತ್ತಿರುವ ಧೂಳು, ಕೆಸರು, ಗಲೀಜು ಪ್ರಾಣಿಗಳೊಂದಿಗೆ ಅವನ ಕುಸ್ತಿಯನ್ನು ಸಾರಿ ಹೇಳುತ್ತವೆ.  ಬಿಳಿ ಏಪ್ರನ್ ಇಸ್ತ್ರಿ ಮಾಡಿದಾಗಷ್ಟೇ ಬೆಳ್ಳಗಿರುತ್ತೆ.  ಪ್ರಾಕ್ಟಿಕಲ್ಸ್ ಮುಗಿಸಿ ಬಂದಾಗ ಕಂದು, ಹಳದಿ, ಹಸಿರು, ಮಣ್ಣು, ಕೆಸರು ಎಲ್ಲ ಬಣ್ಣಗಳ ಮಿಶ್ರಣ ಆಗಿರುತ್ತೆ.  ಆ ಬಣ್ಣಗಳಷ್ಟೇ ಅವನ ಅನುಭವಗಳೂ ಬಣ್ಣಬಣ್ಣವಾಗಿರುತ್ತವೆ! 
    ಪಪ್ಪು, ಇವತ್ತು ಹಂದಿ ಮರಿಗಳನ್ನು ತೊಳೆದು, ಔಷಧಿ ಹಾಕಿದೆ ಕಣೋ, ಅಂತಲೋ, ಅಮ್ಮ, ಇವತ್ತು ಮೊಲದ ಮರಿಗಳನ್ನು ಸ್ವಚ್ಛಮಾಡಿದೆ.  ಕೋಳಿ ಪಿಳ್ಳೆಗಳೀಗೆ ಡ್ರಾಪ್ಸ್ ಹಾಕಿದೆ, ಅಂತಲೋ ಹೇಳುತ್ತಲೇ ಇರುತ್ತಾನೆ.  ಒಂದು ದಿನ ತಲೆಯಿಂದ ಕಾಲಿನವರೆಗೆ ಕೆಸರಿನಲ್ಲಿ ಅದ್ದಿತೆಗೆದ ರೂಪ ಇಟ್ಟುಕೊಂಡು ಬಂದು, ಪಪ್ಪು, ಇವತ್ತು ಕುರಿ, ಮೇಕೆ, ಟಗರುಗಳ ಅಳತೆ ನೋಡಿ, ತೂಕ ಹಾಕಿದ್ವೀ ಕಣೋ.  ಎಲ್ರೂ ಸಣ್ಣ ಸಣ್ಣ ಗಾತ್ರದವುಗಳನ್ನು ಬೇಗ ಬೇಗ ತೆಗೆದುಕೊಂಡು, ಅಳತೆ ಮಾಡಿಬಿಟ್ರು.  ಒಂದು ದೊಡ್ಡ ಟಗರು, ಸುಮಾರು 48 ಕಿಲೋ ತೂಕದ್ದು.  ಅದನ್ನು ಹಿಡೀಲಿಕ್ಕೆ ಬಹಳ ಕಷ್ಟ ಆಯ್ತು.  ಕೊನೆಗೆ ಡಬ್ಲ್ಯುಡಬ್ಲ್ಯುಎಫ್ ಫೈಟಿಂಗ್ ಥರ ಅದರ ಜೊತೆ ಗುದ್ದಾಡಿ, ಎತ್ತಿಕೊಂಡು ಬಂದು, ತೂಕ ಹಾಕಿಯೇ ಬಿಟ್ಟೆ ಕಣೋ, ಅಂತ ತನ್ನ ಸಾಹಸ ಕೊಚ್ಚಿಕೊಂಡ!
    ಪ್ರಾಣಿಗಳ ಜೊತೆ ಒಡನಾಟ ನಿಜಕ್ಕೂ ಆಸಕ್ತಿ ಹುಟ್ಟಿಸುವಂಥದ್ದು.  ಒಂದೊಂದು ಪ್ರಾಣಿಯೂ ಒಂದೊಂದು ಸ್ಪೆಸಿಮನ್.  ಒಂದರಂತೆ ಮತ್ತೊಂದು ಇರುವುದು ಅಪರೂಪವೇ.  ಅವುಗಳ ಆರೈಕೆ ಅವುಗಳ ಒಡೆಯರ ತೃಪ್ತಿ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡೇ ಇರುತ್ತವೆ.  ಭಾರತದಲ್ಲಿ ಪಶುವೈದ್ಯಕೀಯ ರಂಗ ಇನ್ನೂ ಅರಳುವ ಸ್ಥಿತಿಯಲ್ಲಿಯೇ ಇದೆ.  ಇರುವ ನಾಲ್ಕು ಕಾಲೇಜುಗಳಿಂದ ಹೊರಬರುವ ಬೆರಳೆಣಿಕೆಯ ಡಾಕ್ಟರುಗಳು, ಪಶುವೈದ್ಯ ಸಹಾಯಕರು, ಪಶುವೈದ್ಯ ಇಲಾಖೆಯ ಸಿಬ್ಬಂದಿಯ ಜೊತೆ ಹಾಲು ಒಕ್ಕೂಟಗಳಿಂದ ನೇಮಕಗೊಂಡಿರುವ ಸಿಬ್ಬಂದಿ ತಮ್ಮ ನಿತ್ಯದ ರುಟೀನ್ ಟ್ರೀಟ್ಮೆಂಟ್ಗಳ ತಲೆಬಿಸಿಗಳಲ್ಲಿ ಪಶುಗಳ ಜೊತೆಗೆ ಒಡನಾಡುವ ಅಪೂರ್ವ ಅವಕಾಶದ ಸವಿಯನ್ನು ಕಳೆದುಕೊಳ್ಳುತ್ತಿದ್ದಾರೆಂದೇ ಹೇಳಬೇಕು.  ಅಲ್ಲೊಂದು ಇಲ್ಲೊಂದು ಅಪವಾದಗಳಿರಬಹುದಾದರೂ ಪಶುಗಳ ಆರೈಕೆಯ ಸವಿನೆನಪುಗಳನ್ನು ಹಂಚಿಕೊಳ್ಳುವವರು ಇಲ್ಲವೆಂದರೆ ಅತಿಶಯೋಕ್ತಿಯಲ್ಲ.
    ಇಂಗ್ಲೆಂಡಿನ ಪಶುವೈದ್ಯ ಜೇಮ್ಸ್ ಹೆರಿಯಟ್ (ಜೇಮ್ಸ್ ಆಲ್ಫ್ರೆಡ್ ವೈಟ್) ತನ್ನ ಡೈರಿಯಲ್ಲಿ ಬರೆದಿಟ್ಟುಕೊಂಡ ಅಪೂರ್ವ ಅನುಭವಗಳನ್ನು ಆಲ್ ಕ್ರೀಚರ್ಸ್ ಗ್ರೇಟ್ ಅಂಡ್ ಸ್ಮಾಲ್ ಪುಸ್ತಕರ ರೂಪದಲ್ಲಿ ಪ್ರಕಟಿಸಿದ ನಂತರ ಜನಸಾಮಾನ್ಯರಿಗೂ ಪಶುವೈದ್ಯನ ಅನುಭವಗಳು ಆತ್ಮೀಯವಾಗತೊಡಗಿದವು.   ಪಶುವೈದ್ಯರಷ್ಟೇ ಅಲ್ಲದೇ ಸಾಮಾನ್ಯ ಓದುಗರನ್ನೂ ಸಹಿತ ಪ್ರಾಣಿಗಳ ಲೋಕಕ್ಕೆ ಕೊಂಡೊಯ್ಯುವ ಸಾಮಥ್ರ್ಯವಿರುವುದು ಈತನ ಕಥೆಗಳ ವಿಶೇಷ ಎನ್ನುವ ಬೆರಗುಗಣ್ಣಿನಿಂದ ಹೆರಿಯಟ್ನ ಬರಹಗಳನ್ನು ಓದಿದ ಡಾ. ಗಣೇಶ್ ಎಂ. ನೀಲೇಸರ ಆ ಕಥೆಗಳಲ್ಲಿ ಕೆಲವನ್ನು ಆಯ್ದು, ಕನ್ನಡದ ವಾತಾವರಣಕ್ಕೆ ಹೊಂದುವಂತೆ ಮಾರ್ಪಡಿಸಿ, ಮೂಲದ ಸಾರವನ್ನು ಯಥಾವತ್ತಾಗಿ, ಆತ್ಮೀಯವಾಗಿ ನಿರೂಪಿಸಿದ್ದಾರೆ.   ಇದು ಪಶುವೈದ್ಯಕೀಯ ಲೋಕದ ಹಸುರು ಹೊನ್ನು ಎಂಬ ಬೆನ್ನುಡಿಯ ಮಾತು, ಬಿ.ಜಿ.ಎಲ್. ಸ್ವಾಮಿಯವರು ಅನಾವರಣಗೊಳಿಸಿದ ಸಸ್ಯಲೋಕದ ಕೌತುಕ ಪ್ರಾಣಿಪ್ರಪಂಚದಲ್ಲಿಯೂ ಕಾಣಿಸಲು ಸಾಧ್ಯ ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗುತ್ತದೆ.  ಹೆರಿಯಟ್ ಹರಿಯಾಗಿದ್ದರೆ, ಅವನ ಬಾಸ್ ಪ್ರಜಾಪತಿಯಾಗಿದ್ದಾರೆ ಇಲ್ಲಿ! ಇಂಗ್ಲೆಂಡಿನ ಕ್ರಿಶ್ಚಿಯನ್ ಹೆಸರುಗಳೆಲ್ಲಾ ಕನ್ನಡಕ್ಕೆ ವಲಸೆ ಬಂದು ಗುಡ್ಡದಮನೆಯ ಭರಮಣ್ಣ, ಮಾವಿನಕೆರೆಯ ಅಣ್ಣ-ತಮ್ಮಂದಿರು, ಕಿರೀಟಿ, ದೇವಪ್ಪ, ರಾಜಪ್ಪ,  ವಾಸು, ಈಶ್ವರ, ಶೇಷಪೂಜಾರಿ, ಹಂಪಣ್ಣ, ಧಾಕಪ್ಪ, ಜಲಜಮ್ಮ, ಮಾಲಿನಿ ಶರ್ಮ, ನಳಿನಿ, ಲೀನಾ, ಕರಿಯಪ್ಪ, ಭರಮಣ್ಣ, ಹೊನ್ನಪ್ಪ, ಸೋಮಶೇಖರ, ಭೀಮೇಶ, ಶಾಣಪ್ಪ, ಚಂದಪ್ಪ, ನಾಥಪ್ಪ, ಕಪಾಲಿ, ರೈ, ಸೋಮಯ್ಯ ಇತ್ಯಾದಿ ಕನ್ನಡದ ಕಣ್ಮಣಿಳಾಗಿವೆ!
    ಎಮ್ಮೆಯ ಬೆನ್ನಿಗೆ ತಣ್ಣೀರು ಎಂಬ ಲೇಖಕರ ಸ್ವಂತ ಅನುಭವಗಳ ನಿರೂಪಣೆಯಿಂದ ಆರಂಭಗೊಳ್ಳುವ ಇಪ್ಪತ್ತು ಕಥೆಗಳ ಈ ರಸಗವಳದ ಭಾಷೆ, ಶೀಷರ್ಿಕೆ ಮತ್ತು ಚಿತ್ರಕಲಾ ಪರಿಷತ್ತಿನ ವಿದ್ಯಾಥರ್ಿನಿ ಶ್ವೇತಾ ಆಡುಕಲಾ ರಚಿಸಿರುವ ಚಿತ್ರಗಳು ಘಟನಾವಳಿಗಳನ್ನು ಕಣ್ಣಿಗೆ ಕಟ್ಟಿಸುವಂತಿವೆ. ನಾಗೇಶ್ ಹೆಗಡೆಯವರ ಮುಖಪುಟ ವಿನ್ಯಾಸವೂ ಗ್ರಾಮೀಣ ಪರಿಸರಕ್ಕೆ ಒಪ್ಪುವಂತಿದೆ.  ಮೇಲುನೋಟಕ್ಕೆ ಇದು ಪಶುವೈದ್ಯರ ನಿತ್ಯ ಅನುಭವಗಳ ನಿರೂಪಣೆಯಂತಿದ್ದರೂ ಆಂತರ್ಯದಲ್ಲಿ ಮಾನವ ಸ್ವಭಾವ, ಪ್ರಾಣಿಗಳ ಪ್ರೀತಿ, ನೋವು-ನಲಿವು, ಗ್ರಾಮೀಣ ಪರಿಸರ, ಜೀವನ, ಆಥರ್ಿಕ ಸ್ಥಿತಿ ಮುಂತಾದವುಗಳನ್ನು ತಿಳಿಸುವ ಸಮಾಜೋ-ಸಾಂಸ್ಕೃತಿಕ ಕಥಾನಕವಾಗಿದೆ.
    ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿಯದ್ದು.  ಮಾರ್ಜಲದ ಜಲಜಮ್ಮನಂತಹ ಜಿಪುಣ ವ್ಯಕ್ತಿ, ಕ್ರಿಸ್ಮಸ್ ಬೆಳ್ಳಂಬೆಳಗ್ಗೆ ಎಬ್ಬಿಸಿ ತೊಂದರೆಕೊಟ್ಟದ್ದಲ್ಲದೆ ಮಿಲ್ಕ್ಫೀವರ್ಗೆ ಸಕಾಲದಲ್ಲಿ ಚಿಕಿತ್ಸೆ ಕೊಟ್ಟದ್ದಕ್ಕಾಗಿ ಥ್ಯಾಂಕ್ಸ್ ಹೇಳದ ಗುಡ್ಡದಮನೆಯ ಭರಮಣ್ಣ,   ತೇಜೋವಧೆ ಮಾಡುವುದನ್ನೇ ಕಸುಬಾಗಿಸಿಕೊಂಡ ಸತ್ಯಪಾಲ, ಪಶು ಪ್ರದರ್ಶನಗಳಲ್ಲಿ ಬಹುಮಾನ ಗೆಲ್ಲಲೆಂದೇ ಕಳ್ಳ ಮಾರ್ಗಗಳನ್ನು ಅನುಸರಿಸುವ ಪ್ರಾಣಿಗಳ ಒಡೆಯರು ಒಂದೆಡೆ ಇದ್ದರೆ ಡೇರಿ ಫಾಮರ್ಿನ ಕನಸು ಕಟ್ಟಿಕೊಂಡು ನಗರದಿಂದ ಗ್ರಾಮಕ್ಕೆ ಬರುವ ಕಿರೀಟಿಯಂತಹ ತರುಣರು ರೋಗಗ್ರಸ್ಥ ಹಸುಗಳನ್ನು ನಿಭಾಯಿಸಲಾಗದೇ ಕನಸನ್ನೇ ಮಾರಿಕೊಳ್ಳುವುದು, ನಾಯಿ ಸಾಕಿ, ಅದರ ಆರೈಕೆಗೆ ಕಷ್ಟಪಟ್ಟು ದುಡಿದು, ದುಷ್ಟ ಹವ್ಯಾಸಗಳಿಂದ ಮುಕ್ತನಾದ ವಾಸು ನಾಯಿ ಕಾಯಿಲೆಗೆ ಬಲಿಯಾದಾಗ ಮರಳಿ ದುಷ್ಟತಕ್ಕೆ ಇಳಿಯುವುದು, ಕೈಗುಣದ ಮೇಲೆ ಅತಿಯಾದ ವಿಶ್ವಾಸ ಇರಿಸಿ ಪ್ರತಿಬಾರಿಯೂ ಅತಿ ಎನಿಸುವಷ್ಟು ಹೊಗಳುವ ದೇವಪ್ಪ, ಮುದ್ದು ಬೆಕ್ಕಿನ ಉಪಸ್ಥಿತಿಯಿಂದಾಗಿಯೇ ಆತ್ಮವಿಶ್ವಾಸದಿಂದ ವ್ಯವಹಾರ ನಡೆಸುವ, ಆ ಬೆಕ್ಕು ಕಾಯಿಲೆಗೆ ತುತ್ತಾಗಿ ಸಾಯವ ಸ್ಥಿತಿಗೆ ಬಂದಾಗ ಆತ್ಮವಿಶ್ವಾಸವೇ ಕುಸಿದರೂ ಮತ್ತೆ ಬೆಕ್ಕು ಗುಣಮುಖವಾದಾಗ ಆತ್ಮವಿಶ್ವಾಸ ಗರಿಗೆದರಿ ಚುರುಕಿನಿಂದ ವ್ಯವಹರಿಸುವ ಜéಪಾಠಿ ಕಾಂಡಿಮೆಂಟ್ಸ್ನ ಮಾಲಿಕ ರಾಜಯ್ಯನಂತಹವರೂ ಇಲ್ಲಿ ಇದ್ದಾರೆ. 
    ಪದೇ ಪದೇ ಕಾಯಿಲೆ ಬೀಳುತ್ತಿದ್ದ ತನ್ನ ವೀಣೆ ಹಸುವನ್ನು ಕಸಾಯಿ ಖಾನೆಗೆ ಮಾರಲು ಸಿದ್ಧನಾಗುವ ಧಾಕಪ್ಪ ಹಸುವನ್ನು ಉಸ್ಮಾನ್ ಸಾಬನೊಂದಿಗೆ ಕಳುಹಿಸಿಕೊಟ್ಟರೂ ಅದು ಸ್ವಲ್ಪಹೊತ್ತು ಬಿಟ್ಟು ಮತ್ತೆ ಧಾಕಪ್ಪನ ಕೊಟ್ಟಿಗೆಗೇ ಮರಳಿದ್ದು ನೋಡಿ ಪ್ರೀತಿ ಉಕ್ಕಿಬಂದು, ಈ ಹಸು ಇಲ್ಲೇ ಇರುತ್ತೆ.  ನೀ ಕೊಡೋ ಹಣ ನಂಗೆ ಬೇಡ.  ಈ ಹಸು ಇನ್ನು ನಂಗೇನೂ ಕೊಡ್ಬೇಕಾಗಿಲ್ಲ ಎಂದು ಹೇಳಿ ಅದರ ಭುಜ ಅಪ್ಪಿಕೊಂಡು ಮೈಸವರತೊಡಗುವುದು ಮಾನವೀಯತೆಗೆ ಹಿಡಿದ ಕನ್ನಡಿಯಾದರೆ ಥೇಟ್ ನಸರ್ಿನಂತೆಯೇ ಪ್ರಾಣಿಗಳ ಆರೈಕೆ ಮಾಡುವ ಸೋಮಶೇಖರರ ನಾಯಿ ಟ್ರೂಡಿ (ನಾಯಮ್ಮ ನರ್ಸಮ್ಮ) ಅಪರೂಪವಾದರೂ ನಿರ್ಮಲವಾದ ಪ್ರೀತಿಯನ್ನು ತೋರಿಸಿ, ಜೀವನ ಮೌಲ್ಯಗಳು ಪ್ರಾಣಿ ಮತ್ತು ಮನುಷ್ಯ ಲೋಕದಲ್ಲಿ ಏಕಪ್ರಕಾರವಾಗಿದೆ ಎನ್ನುವುದನ್ನು ಸಾರುತ್ತವೆ.
        ಜೋಕ್ ಮಾಡಿ ಪಶುವೈದ್ಯರನ್ನು ಗೇಲಿಮಾಡುವ ಸೋಮಯ್ಯನನ್ನೇ ಪೇಚಿಗೆ ಸಿಲುಕಿಸಿ ಅವನ ತಂತ್ರವನ್ನೇ ಪ್ರತಿ ತಂತ್ರವಾಗಿಸಿ ಶಾಕ್ ಕೊಡುವ ಜ್ಯೂನಿಯರ್ ವೈದ್ಯ ಕದಂ (ಒಳ್ಳೇಜೋಕ್ನಿಂದ ಮನಸ್ಸು ಫ್ರೆಶ್ ಆಗುತ್ತೆ), ಪ್ರಾಣಿಗೆ ಶುಶ್ರೂಷೆ ಮಾಡುವ ಸಂದರ್ಭದಲ್ಲಿ ಕುದುರೆಯಿಂದ ಒದೆ ತಿನ್ನುವ, ಹೋರಿಯಿಂದ ಗುದ್ದಿಸಿಕೊಳ್ಳುವ ಡಾ. ಹರಿ, ಅವನ ಕೈಯಲ್ಲಿದ್ದ ಸಿರಿಂಜ್ ಅಚಾನಕ್ ಆಗಿ ಒಮ್ಮೆ ತಗುಲಿದ್ದಕ್ಕಾಗಿ ತನಗೆ ನಪುಂಸಕತ್ವವೇ ಬಂತು ಎಂದು ಅಲವತ್ತುಕೊಳ್ಳುವ ಮತ್ತು ಎರಡನೇ ಬಾರಿ ಸಿರಿಂಜ್ ತಗುಲಿದ್ದಕ್ಕಾಗಿ ನಪುಂಸಕತ್ವ ಕಳೆದು ಅವಳಿ ಜವಳಿ ಮಕ್ಕಳು ಹುಟ್ಟಿವೆ ಎಂದು ನಂಬುವ ನಾಥಪ್ಪ, ಅವನನ್ನು ಗೇಲಿ ಮಾಡುವ ರೈ ಮತ್ತು ಕಪಾಲಿ, ನಾಯಿಯ ಚಿಕಿತ್ಸೆಗೆಂದು ತೆರಳಿದಾಗ ಟಿ.ವಿ. ರಿಪೇರಿಯನ್ನೂ ಮಾಡಿಸಿಕೊಂಡು ಮತ್ತೊಮ್ಮೆ ಟಿ.ವಿ. ಕೈಕೊಟ್ಟಾಗ ಡಾಕ್ಟರರನ್ನೇ ಕರೆಸುವ ಚಂದಪ್ಪ, ಜೂಜಿನ ಕುದುರೆಯ ಆರೋಗ್ಯ ತಪಾಸಣೆಗೆ ಬಾಸ್ ಪ್ರಜಾಪತಿಯ ಬದಲಿಗೆ ಹೋಗಿ ಅವಜ್ಞೆಗೊಳಗಾದರೂ ತೀವ್ರ ಅಲಜರ್ಿಯಿಂದ ಬಳಲುತ್ತಿದ್ದ ಬೆಸ್ಟ್ ಕುದುರೆ ಅಮೃತಾಳನ್ನು ತನ್ನ ಸಮಯೋಚಿತ ಚಿಕಿತ್ಸೆಯಿಂದಾಗಿ ಬದುಕಿಸಿದಾಗ ಅದರ ಉಸ್ತುವಾರಿ ನೋಡಿಕೊಳ್ಳುವ ಭೀಮೇಶನಿಂದ ಮೆಚ್ಚುಗೆಗಳಿಸುವುದು ಹೀಗೆ ಹಲವು ನೈಜ ಘಟನೆಗಳು ಯಥಾವತ್ತಾಗಿ ಮೂಡಿಬಂದು ಓದುಗರ ಅನುಭವವನ್ನು ವಿಸ್ತರಿಸುತ್ತವೆ.
    ಪಶುವೈದ್ಯಕೀಯ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ಕೆರಳಿಸುವ ಇಲ್ಲಿನ ಕಥೆಗಳಲ್ಲಿ ಪಶು ಸಹಾಯಕ ಮತ್ತು ಪಶುವೈದ್ಯದ ವಿದ್ಯಾಥರ್ಿಗಳಿಗೆ ತಾವು ಮುಂದೆ ಕೈಗೊಳ್ಳಲಿರುವ ಸೇವಾ ಚಟುವಟಿಕೆ, ಪಶುವೈದ್ಯರ ದಿನಚರಿ, ಪೇಚಾಟಗಳು, ಮಾನವೀಯ ಗುಣಗಳು ಹೇಗಿರುತ್ತವೆ ಎನ್ನುವುದರ ಕಿರುಪರಿಚಯ ಮಾಡಿಕೊಡುತ್ತವೆ.  ಹಾಗೆಯೇ ಇಲ್ಲಿ ಪ್ರಸ್ತಾಪಿತವಾಗಿರುವ ಕೀಟೋಸಿಸ್, ಬ್ರುಸೆಲೋಸಿಸ್, ಮಿಲ್ಕ್ ಫೀವರ್, ಮಿಕ್ಸೆಡಿಮಾ, ಅಟರ್ಿಕೇರಿಯಾ, ಆಕ್ಟಿನೋ ಬ್ಯಾಸಿಲೋಸಿಸ್, ಕೆನೈನ್ ಡಿಸ್ಟೆಂಪರ್, ಪೆರಿಟೋನೈಟಿಸ್, ಲಿವರ್ ಫ್ಲೂಕ್,  ಪಶುಗಳಿಗೆ ಬರುವ ಕೆಲವು ಕಾಯಿಲೆಗಳು, ಅವುಗಳಿಂದ ಉಂಟಾಗುವ ನಷ್ಟ, ಫಜೀತಿ, ಮಾಲೀಕರ ಪರದಾಟ ಎಲ್ಲವೂ ಅತಿ ಎನಿಸದಂತೆ, ಹಾಸ್ಯರಸ ಲೇಪನದೊಂದಿಗೆ ಮೂಡಿಬಂದು ನಗುವಿನೊಂದಿಗೆ ನೋವಿನ ಗಾಢತೆಯನ್ನೂ ಪರಿಚಯಿಸುತ್ತವೆ.  ಬಹುಶಃ ಈ ಸಂಕಥನಗಳನ್ನು ರಚಿಸಿದ 40 ರಿಂದ 60 ರ ದಶಕಗಳವರೆಗೆ ಲಭ್ಯವಿದ್ದ ಚಿಕಿತ್ಸಾ ಪದ್ಧತಿ ಮತ್ತು ಔಷಧಗಳ ಮಿತಿಯಲ್ಲಿದ್ದ ಕಾರಣ ಅನೇಕ ರೋಗಗಳಿಗೆ ಚಿಕಿತ್ಸೆ ತಗುಲುತ್ತಿರಲಿಲ್ಲವೇನೋ.  ಈಗ ಹೊಸ ಆವಿಷ್ಕಾರಗಳಿಂದಾಗಿ ಬದಲಾವಣೆಗಳು ಬಂದಿರಲೂಬಹುದು.
    ಒಮ್ಮೆ ಪುಟ ತೆರೆದರೆ ಕೊನೆಯ ಪುಟದವರೆಗೂ ಒಂದೇ ಓಟದಲ್ಲಿ ಓದಿಸಿಕೊಂಡುಹೋಗುವ ಡೇರಿ ಡಾಕ್ಟರ್ ಹೋರಿ ಮಾಸ್ಟರ್ ಪಶುವೈದ್ಯಲೋಕದ ನೋವು-ನಲಿವುಗಳಿಗೆ ಕಿಟಕಿಯಾಗುವ, ಕನ್ನಡದಲ್ಲಿ ನಿರೂಪಿತವಾಗಿರುವ  ಅಪರೂಪದ, ಸಂಗ್ರಹ ಯೋಗ್ಯ ಕೃತಿ ಎನ್ನಲು ಅಡ್ಡಿಯೇನಿಲ್ಲ.

ಜೇಮ್ಸ್ ಹೆರಿಯಟ್ ಕಿರುಪರಿಚಯ

    1916ರ ಅಕ್ಟೋಬರ್ 03 ರಂದು ಇಂಗ್ಲೆಂಡಿನ ಡರ್ಹ್ಯಾಂ ಕೌಂಟಿಯ ಸುಂಡರ್ಲೆಂಡ್ನಲ್ಲಿ ಜನಿಸಿದ ಜೇಮ್ಸ್ ಹೆರಿಯಟ್ (ಜೇಮ್ಸ್ ಆಲ್ಫ್ರೆಡ್ ವೈಟ್) ಗ್ಲಾಸ್ಗೊ ವೆಟೆರಿನರಿ ಕಾಲೇಜಿನಲ್ಲಿ ಪಶುವೈದ್ಯ ಪದವಿ ಮುಗಿಸಿ ಸ್ವಲ್ಪ ಸಮಯ ಸುಂಡರ್ಲೆಂಡ್ನಲ್ಲಿ ನಂತರ ಯಾಕರ್್ಶೈರ್ನ ಥಸ್ಕರ್್ ನಗರದ ಕಕರ್್ಗೇಟ್ನಲ್ಲಿ ಪಶುವೈದ್ಯರಾಗಿ ಸೇವೆಸಲ್ಲಿಸಿದರು.  ಎರಡನೇ ಪ್ರಪಂಚಯುದ್ಧದ ಸಮಯದಲ್ಲಿ ವಾಯುಸೇನೆಯಲ್ಲಿ ಕಡ್ಡಾಯ ಸೇವೆ ಸಲ್ಲಿಸಿದ ನಂತರ ತಮ್ಮ ಪಶುವೈದ್ಯ ಸೇವೆಗೆ ಮರಳಿದರು.  ಅವರ ಮಗ ಜೇಮ್ಸ್ ಅಲೆಗ್ಸಾಂಡರ್ ವೈಟ್ ಪಶುವೈದ್ಯವೃತ್ತಿ ಕೈಗೆತ್ತಿಕೊಂಡರೆ ಮಗಳು ರೋಸ್ಮೇರಿ ಪೇಜ್ ಮಾನವ ವೈದ್ಯಕೀಯ ವೃತ್ತಿ ಆರಿಸಿಕೊಂಡಳು.    1995 ರ ಫೆಬ್ರವರಿ 23 ರಂದು ಪ್ರಾಸ್ಟೇಟ್ ಕ್ಯಾನ್ಸರ್ನಿಂದ ನಿಧನರಾದ ಜೇಮ್ಸ್ ಹೆರಿಯಟ್ ತಮ್ಮ ಅನುಭವ ಕಥನಗಳನ್ನು ಪ್ರಕಟಿಸಿ ಖ್ಯಾತರಾದರು. 1974 - 76 ರಲ್ಲಿ ಅವರ ಕೃತಿಗಳನ್ನಾಧರಿಸಿದ ಚಲನಚಿತ್ರ ಮತ್ತು ಟಿ.ವಿ. ಸೀರಿಯಲ್ಗಳು ಅವರನ್ನು ಜನಪ್ರಿಯತೆಯ ತುತ್ತತುದಿಗೇರಿಸಿದವು.
    ಜೇಮ್ಸ್ ಹೆರಿಯಟ್ ಅವರ ಕೆಲವು ಪುಸ್ತಕಗಳು ಹೀಗಿವೆ: 
Only They Could Talk, It Shouldn't Happen to a Vet, All Creatures Great and Small, Let Sleeping Vets Lie, Vet in Harness, All Things Bright and Beautiful, Vets Might Fly, Vet in a Spin, All Things Wise and Wonderful, James Herriot's Yorkshire, The Lord God Made Them All, Every Living Thing, James Herriot's Cat Stories, James Herriot's Favourite Dog Stories.

    ಮಕ್ಕಳಿಗಾಗಿ ಅವರು ರಚಿಸಿರುವ ಕೆಲವು ಪುಸ್ತಕಗಳು ಇವು:
Blossom Comes Home, Moses the Kitten, Only One Woof, The Christmas Day Kitten, Bonny's Big Day, The Market Square Dog, Oscar, Cat-About-Town, Smudge, the Little Lost Lamb, James Herriot's Treasury for Children.

    ಲಾಡರ್್ ಗ್ರಹಾಂ ಅವರ “James Herriot: The Life of a Country Vet”, , ಜಿಮ್ ವೈಟ್ ಅವರ “The Real James Herriot: The Authorized Biography” ಮತ್ತು ಜಾನ್ ಲೆವಿಸ್ ಸ್ಟೆಂಪೆಲ್ ಅವರ  “Young Herriot: The Early Life and Times of James Herriot” ಕೃತಿಗಳು ಹೆರಿಯಟ್ ಜೀವನ ಸಾಧನೆಗಳನ್ನು ತಿಳಿಸುತ್ತಿವೆ. ಹಾಗೆಯೇ “All Creatures Great and Small”  ಹೆಸರಿನ ಚಲನಚಿತ್ರ ಮತ್ತು ಟಿ.ವಿ. ಸೀರಿಯಲ್ಗಳು ಅತ್ಯಂತ ಜನಪ್ರಿಯವಾಗಿದ್ದವು. ಹೆಚ್ಚಿನ ವಿವರಗಳಿಗೆ ನೋಡಿ:            
www.jamesherriot.org       
www.worldofjamesherriot.org
http://en.wikipedia.org/wiki/James_Herriot


- ಯಾಜ್ಞವಲ್ಕ್ಯ
                                       
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಕೇಂದ್ರ, ಚಿತ್ರದುರ್ಗ
ವಿಳಾಸ : ಬೇದ್ರೆ ಮಂಜುನಾಥ, ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಹಾಸನ - 573 201 ಫೋ.9448589089
ಛಜಜಡಿಜ.ಟಚಿಟಿರಿಣಟಿಚಿಣ@ರಟಚಿಟ.ಛಿಠಟ 

Pareeksha Mitra of Hassan - Article in Prajavani Shikshana 18 March 2013

ಇಲ್ಲಿದ್ದಾನೆ ಪರೀಕ್ಷಾ ಮಿತ್ರ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಹಂಬಲ ಹಲವರಿಗಿದ್ದರೆ, ಕನಿಷ್ಠ ಅಂಕಗಳನ್ನಾದರೂ ತೆಗೆದುಕೊಂಡು ಪಾಸಾದರೆ ಸಾಕು ಎನ್ನುವ ಕೆಲವರಾದರೂ ಇದ್ದಾರೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು, ಕೂಲಿ ಮಾಡಿಕೊಂಡೇ ಓದಲಿಕ್ಕೆ ಬರುವ ಕಷ್ಟಜೀವಿಗಳು `ಹೇಗಾದರೂ ಸರಿ ಎಸ್ಸೆಸ್ಸೆಲ್ಸಿ ಮುಗಿಸಿಕೊಂಡರೆ ಮುಂದೆ ಏನಾದರೂ ಮಾಡಬಹುದು' ಎಂದು ಕನಸು ಕಾಣುತ್ತಿರುತ್ತಾರೆ. ಇಂತಹವರ ನೆರವಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಸನ ಘಟಕವು ವಿವಿಧ ವಿಷಯಗಳ ಶಿಕ್ಷಕರ ಕ್ಲಬ್‌ಗಳು ಮತ್ತು ಮುಖ್ಯೋಪಾಧ್ಯಾಯರ ಸಂಘದ ಸಹಕಾರದೊಂದಿಗೆ `ಪರೀಕ್ಷಾ ಮಿತ್ರ' ಹೆಸರಿನ ಪ್ರಶ್ನೆ ಕೋಠಿಗಳನ್ನು ಹೊರತಂದಿದೆ.
ಪರೀಕ್ಷೆಗೆ ನಿಗದಿಪಡಿಸಿರುವ ನೀಲಿ ನಕ್ಷೆ ಆಧಾರದಲ್ಲಿ ಎಸ್ಸೆಸ್ಸೆಲ್ಸಿಯ ಆರು ವಿಷಯಗಳಲ್ಲಿ `ಪರೀಕ್ಷಾ ಮಿತ್ರ' ಪ್ರಶ್ನೆ ಕೋಠಿಗಳನ್ನು ಮತ್ತು ಆರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಶಾಲೆಗಳಿಗೆ ನೀಡಲಾಗಿದೆ. ಅವುಗಳನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಅಂತರ್ಜಾಲದಿಂದಲೂ ಪಡೆದುಕೊಳ್ಳುವಂತೆ ಬ್ಲಾಗ್‌ಗಳಲ್ಲಿ ಅಳವಡಿಸಲಾಗಿದೆ. ಆಸಕ್ತರು ಮೇಲಿನ ವಿಳಾಸದ ಬ್ಲಾಗ್‌ಗಳಿಂದ ಪರೀಕ್ಷಾ ಮಿತ್ರ ಕೈಪಿಡಿಗಳನ್ನು, ಪ್ರಶ್ನೆಪತ್ರಿಕೆ ಮತ್ತು ಮಾದರಿ ಉತ್ತರ ಪತ್ರಿಕೆಗಳನ್ನು, ವರ್ಕ್‌ಬುಕ್‌ಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
-ಬಿ.ಎಂ. Bedre Manjunath
Pareeksha Mitra of Hassan - Article in Prajavani Shikshana 18 March 2013

Thursday, March 14, 2013

Changes in UPSC Main Examination 2013 - Article in DH Education 14 March 2013










Changes in UPSC Main Examination 2013 - Article in  DH Education 14 March 2013

http://www.deccanherald.com/content/318556/pattern-changed-better.html

Pattern changed, for the better

Bedre Manjunath, March 14, 2013:
IN LIMELIGHT Bedre Manjunath gives a cursory glance of the newly changed Main Exam pattern of the UPSC
A welcome change is introduced in civil services exam patterns. The report of the Committee, under the chairmanship of Prof Arun S Nigavekar, former chairman, UGC, was examined by the Department of Personnel and Training and then presented before the Prime Minister for final approval. 
Prime Minister Manmohan Singh has approved these changes. The decision came on the recommendation of a committee constituted by the Union Public Service Commission (UPSC). 

No Qualifying Test Papers!

The new pattern of Civil Services (Main) Examination 2013 has no qualifying test papers. In the earlier pattern, those candidates who cleared the first (preliminary) examination had to appear in two qualifying papers to test their language skills at the CS (Mains) exams: English and a regional language. The Union Public Service Commission (UPSC) disqualified 705 civil service aspirants in the Civil Services (Mains) Examination for flunking the Class X level language papers in 2011. Half of the 705 candidates failed the English paper while another 272 failed in the Hindi paper. In 2010 too, 1264 of the 11,865 candidates (10.6%) who appeared in the exam had failed the language papers. These marks were not counted for ranking successful candidates. But aspirants who failed the language test were never told how they performed in the 7 other papers: essay, general studies, and optional subjects.

Restriction on choosing language medium of writing


Candidates will have the option to answer all the question papers, except Section 2 of the Paper-I (English Comprehension and English Précis) in English or Hindi. If the candidate has had his / her graduation in any of the following language mediums using the particular language medium for qualifying the graduate level examination, then he/she may opt for that particular language medium to answer all the question papers. They are: Assamese, Bengali, Bodo, Dogri, Gujarati, Kannada, Kashmiri, Konkani, Maithili, Malayalam, Manipuri, Marathi, Nepali, Oriya, Punjabi, Sanskrit, Santhali, Sindhi, Tamil, Telugu, and Urdu. In the interest of maintaining the quality and standards of examination, a minimum number of 25 candidates should opt for a specific language medium for answering the question papers in that language medium. In case there are less than 25 candidates opting for any approved language medium (other than English or Hindi), then those candidates will be required to write their examination either in Hindi or in English only.

Interview 

The candidate will be interviewed by a Board that will have before it a record of the candidate’s career. The number of candidates to be summoned for interview will be about twice the number of vacancies to be filled (earlier this ration was 1:3). He/she will be asked questions on matters of general interest. The object of the interview is to assess the personal suitability of the candidate for a career in public service by a Board of competent and unbiased observers. The test is intended to judge the mental calibre of a candidate. In broad terms, this is really an assessment of not only his/her intellectual qualities but also social traits and his/her interest in current affairs. Some of the qualities to be judged are mental alertness, critical powers of assimilation, clear and logical exposition, balance of judgement, variety and depth of interest, ability for social cohesion and leadership, intellectual and moral integrity.

The technique of the interview is not that of a strict cross-examination but of a natural, though directed, and purposive conversation, which is intended to reveal the mental qualities of the candidate. The interview test is not intended to be a test of the specialised or general knowledge of the candidates either, which has been already tested through their written papers. Candidates are expected to have taken an intelligent interest not only in their special subjects of academic study but also in the events which are happening around them both within and outside their own state or country as well as in modern currents of thought and in new discoveries which should rouse the curiosity of well-educated youth.

List of Optional Subjects for Main Exam

Candidates may choose any one optional subject from amongst the list of 48 subjects given (25 Optional Subjects in Group – 1, and 23 Literature Subjects in Group – 2).  A candidate can opt for the literatures of a language (22+1), indicated in Group - 2 as an optional subject, only if the candidate has graduated in the literature of that particular language as the main subject.

Group – 1
Agriculture / Animal Husbandry and Veterinary Science / Anthropology / Botany / Chemistry / Civil Engineering / Commerce and Accountancy / Economics / Electrical Engineering / Geography / Geology / History / Law / Management / Mathematics / Mechanical Engineering / Medical Science / Philosophy / Physics / Political Science and International Relations / Psychology / Public Administration / Sociology / Statistics / Zoology

Group - 2
Literature of any one of the 22 + 1 languages: Assamese, Bengali, Bodo, Dogri, Gujarati, Hindi, Kannada, Kashmiri, Konkani, Maithili, Malayalam, Manipuri, Marathi, Nepali, Oriya, Punjabi, Sanskrit, Santhali, Sindhi, Tamil, Telugu, Urdu, English.